‘ಇದುವರೆಗೆ ತನ್ನ ಕೈಯಿಂದ ಸುಮಾರು ₹40 ಸಾವಿರ ಖರ್ಚಾಗಿದೆ. ಈ ಸೇವೆಯಿಂದಾಗಿ ನನಗೆ ಹಾಗೂ ನನ್ನ ಕುಟುಂಬಕ್ಕೆ ತೃಪ್ತಿಯಿದೆ. 10 ವರ್ಷದ ಹಿಂದೆ ಮದ್ಯವ್ಯಸನಿಯಾಗಿ, ಕುಟುಂಬಕ್ಕೆ ಭಾರವಾಗಿದ್ದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನವಜೀವನ ಸಮಿತಿಯವರು ವ್ಯಸನದಿಂದ ಮುಕ್ತಿ ಮಾಡಿ, ಮನುಷ್ಯನನ್ನಾಗಿ ಮಾಡಿದರು. ಈಗ ಇನ್ನೊಬ್ಬರ ಜೀವ ಉಳಿಸುವ ಕಾರ್ಯಕ್ಕೆ ನನ್ನನ್ನು ತೊಡಗಿಸಿಕೊಂಡಿದ್ದೇನೆ’ ಎಂದು ರಾಮದಾಸ್ ಸಂತಸ ಹಂಚಿಕೊಂಡರು.