ಸಂಸ್ಥೆಯ ಸಂಚಾಲಕ ಮಧು ಬೋಪಣ್ಣ ಮಾತನಾಡಿ, ‘ಪ್ರಧಾನ ಮಂತ್ರಿ ನಿಧಿ ಖಾತೆಗೆ ₹ 1 ಕೋಟಿ ಹಣ ದೇಣಿಗೆ ನೀಡಲಾಗಿದ್ದು, ಕೊಡಗು ಜಿಲ್ಲಾಡಳಿತಕ್ಕೆ ಸಂಸ್ಥೆ ವತಿಯಿಂದ ಸಹಾಯ ಮಾಡಲಾಗಿದೆ. ವೈದ್ಯಕೀಯ ಉಪಕರಣ ಸೇರಿದಂತೆ ಸಂಕಷ್ಟದಲ್ಲಿರುವವರಿಗೆ ಸಹಾಯವಾಗುವ ನಿಟ್ಟಿನಲ್ಲಿ 2 ಸಾವಿರ ಕೆ.ಜಿ, ಬೇಳೆ, 2 ಸಾವಿರ ಲೀಟರ್ ಎಣ್ಣೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.