<p><strong>ವಿರಾಜಪೇಟೆ:</strong> ಪುರಭವನದಲ್ಲಿ ಗುರುವಾರ ನಡೆದ ಪುರಸಭೆಯ ವಾರ್ಷಿಕ ಹರಾಜಿನಲ್ಲಿ ಕಳೆದ ಸಾಲಿಗಿಂತ ₹18.82 ಲಕ್ಷ ಕಡಿಮೆ ಆದಾಯ ಬಂದ ಹಿನ್ನೆಲೆಯಲ್ಲಿ ಕೆಲ ಮಳಿಗೆಗಳಿಗೆ ಮರು ಹರಾಜು ನಡೆಸಲು ನಿರ್ಧರಿಸಲಾಯಿತು.</p>.<p>ಗುರುವಾರ ವಾರ್ಷಿಕ ಹರಾಜಿನಲ್ಲಿ ಭಾಗವಹಿಸಿದ ಮಳಿಗೆಗಳ ಆಕಾಂಕ್ಷಿಗಳು ಹೆಚ್ಚಿನ ಆಸಕ್ತಿ ತೋರಲಿಲ್ಲ. ಕಳೆದ ಸಾಲಿನ ಹರಾಜಿನಲ್ಲಿ ಪುರಸಭೆಗೆ ₹ 38.34 ಲಕ್ಷ ಆದಾಯ ಬಂದಿದ್ದು, ಈ ಬಾರಿ ಪುರಸಭೆಗೆ ₹ 19.52 ಲಕ್ಷ ಮೊತ್ತ ಬಂದಿತ್ತು. ಕಡಿಮೆ ಆದಾಯ ಬಂದ ಹಿನ್ನೆಲೆಯಲ್ಲಿ 4 ಹಸಿಮೀನು ಮಳಿಗೆ, 5 ಕುರಿ ಮಾಂಸದ ಮಳಿಗೆ ಮತ್ತು 3 ಕೋಳಿ ಮಾಂಸದ ಮಳಿಗೆ ಮತ್ತು ವಾಹನ ಶುಲ್ಕ ಎತ್ತಾವಳಿ ಹರಾಜನ್ನು ಮತ್ತೆ ಕರೆಯಲಾಗುತ್ತದೆ ಎಂದು ಪುರಸಭೆಯ ಮುಖ್ಯಾಧಿಕಾರಿ ನಾಚಪ್ಪ ಮಾಹಿತಿ ನೀಡಿದರು.</p>.<p>ಸಭೆಯಲ್ಲಿ ಕೆಲ ವರ್ತಕರು ಮಾತನಾಡಿ, ಪಟ್ಟಣದ ಪಂಜರುಪೇಟೆಯಲ್ಲಿ ಮುಖ್ಯರಸ್ತೆಯಲ್ಲಿ ಅಂಗಡಿಗಳ ಮುಂಭಾಗ ವಾಹನ ನಿಲುಗಡೆ ಮಾಡುತ್ತಿರುವುದರಿಂದ ವರ್ತಕರು, ಸಾರ್ವಜನಿಕರು ಸೇರಿದಂತೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ನಾಚಪ್ಪ ಅವರು ಪಾದಚಾರಿ ರಸ್ತೆ ಅಭಿವೃದ್ಧಿಗೆ ₹27 ಲಕ್ಷ ಮೊತ್ತದ ಟೆಂಡರ್ ಕರೆಯಲಾಗಿದ್ದು, ಸದ್ಯದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು. ಸಭೆಯ ಆರಂಭದಲ್ಲಿ ಪಟ್ರಪಂಡ ರಘು ನಾಣಯ್ಯ, ಪಿ.ಕೆ ಮಹ್ಮದ್ ಮಾತನಾಡಿದರು.</p>.<p>ಈ ಹರಾಜು ಪ್ರಕ್ರಿಯೆಯಲ್ಲಿ ಪುರಸಭೆ ಕಂದಾಯ ಅಧಿಕಾರಿ ವಿ.ಕೆ. ಸೋಮಶೇಖರ್, ಪರಿಸರ ಎಂಜಿನಿಯರ್ ರೀತು ಸಿಂಗ್, ಸಿಬ್ಬಂದಿ ಕೆ.ಎಂ. ಸುಲೇಖ, ಎಂ.ಯು. ರಜನಿ ಮತ್ತಿತರರು ಕಾರ್ಯನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿರಾಜಪೇಟೆ:</strong> ಪುರಭವನದಲ್ಲಿ ಗುರುವಾರ ನಡೆದ ಪುರಸಭೆಯ ವಾರ್ಷಿಕ ಹರಾಜಿನಲ್ಲಿ ಕಳೆದ ಸಾಲಿಗಿಂತ ₹18.82 ಲಕ್ಷ ಕಡಿಮೆ ಆದಾಯ ಬಂದ ಹಿನ್ನೆಲೆಯಲ್ಲಿ ಕೆಲ ಮಳಿಗೆಗಳಿಗೆ ಮರು ಹರಾಜು ನಡೆಸಲು ನಿರ್ಧರಿಸಲಾಯಿತು.</p>.<p>ಗುರುವಾರ ವಾರ್ಷಿಕ ಹರಾಜಿನಲ್ಲಿ ಭಾಗವಹಿಸಿದ ಮಳಿಗೆಗಳ ಆಕಾಂಕ್ಷಿಗಳು ಹೆಚ್ಚಿನ ಆಸಕ್ತಿ ತೋರಲಿಲ್ಲ. ಕಳೆದ ಸಾಲಿನ ಹರಾಜಿನಲ್ಲಿ ಪುರಸಭೆಗೆ ₹ 38.34 ಲಕ್ಷ ಆದಾಯ ಬಂದಿದ್ದು, ಈ ಬಾರಿ ಪುರಸಭೆಗೆ ₹ 19.52 ಲಕ್ಷ ಮೊತ್ತ ಬಂದಿತ್ತು. ಕಡಿಮೆ ಆದಾಯ ಬಂದ ಹಿನ್ನೆಲೆಯಲ್ಲಿ 4 ಹಸಿಮೀನು ಮಳಿಗೆ, 5 ಕುರಿ ಮಾಂಸದ ಮಳಿಗೆ ಮತ್ತು 3 ಕೋಳಿ ಮಾಂಸದ ಮಳಿಗೆ ಮತ್ತು ವಾಹನ ಶುಲ್ಕ ಎತ್ತಾವಳಿ ಹರಾಜನ್ನು ಮತ್ತೆ ಕರೆಯಲಾಗುತ್ತದೆ ಎಂದು ಪುರಸಭೆಯ ಮುಖ್ಯಾಧಿಕಾರಿ ನಾಚಪ್ಪ ಮಾಹಿತಿ ನೀಡಿದರು.</p>.<p>ಸಭೆಯಲ್ಲಿ ಕೆಲ ವರ್ತಕರು ಮಾತನಾಡಿ, ಪಟ್ಟಣದ ಪಂಜರುಪೇಟೆಯಲ್ಲಿ ಮುಖ್ಯರಸ್ತೆಯಲ್ಲಿ ಅಂಗಡಿಗಳ ಮುಂಭಾಗ ವಾಹನ ನಿಲುಗಡೆ ಮಾಡುತ್ತಿರುವುದರಿಂದ ವರ್ತಕರು, ಸಾರ್ವಜನಿಕರು ಸೇರಿದಂತೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ನಾಚಪ್ಪ ಅವರು ಪಾದಚಾರಿ ರಸ್ತೆ ಅಭಿವೃದ್ಧಿಗೆ ₹27 ಲಕ್ಷ ಮೊತ್ತದ ಟೆಂಡರ್ ಕರೆಯಲಾಗಿದ್ದು, ಸದ್ಯದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು. ಸಭೆಯ ಆರಂಭದಲ್ಲಿ ಪಟ್ರಪಂಡ ರಘು ನಾಣಯ್ಯ, ಪಿ.ಕೆ ಮಹ್ಮದ್ ಮಾತನಾಡಿದರು.</p>.<p>ಈ ಹರಾಜು ಪ್ರಕ್ರಿಯೆಯಲ್ಲಿ ಪುರಸಭೆ ಕಂದಾಯ ಅಧಿಕಾರಿ ವಿ.ಕೆ. ಸೋಮಶೇಖರ್, ಪರಿಸರ ಎಂಜಿನಿಯರ್ ರೀತು ಸಿಂಗ್, ಸಿಬ್ಬಂದಿ ಕೆ.ಎಂ. ಸುಲೇಖ, ಎಂ.ಯು. ರಜನಿ ಮತ್ತಿತರರು ಕಾರ್ಯನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>