ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಲೆಯ ವಾರ್ಡನ್ ದೀಪಕ್, ‘ಅಧಿಕಾರಿಗಳ ಅನುಮತಿ ಪಡೆದೇ ರಜೆ ನೀಡಲಾಗಿದೆ. ‘ಜನರೇಟರ್ ಖರೀದಿ ಪ್ರಕ್ರಿಯೆಯು ಟೆಂಡರ್ ಹಂತದಲ್ಲಿದೆ. ವಿದ್ಯುತ್ ಇಲ್ಲದೇ ಇರುವುದರಿಂದ 500ಕ್ಕೂ ಅಧಿಕ ಮಕ್ಕಳಿಗೆ ನೀರು ಪೂರೈಸಲಾಗುತ್ತಿಲ್ಲ. ಸದ್ಯ, ದೂರದ ಊರಿನ ಹಾಗೂ ಅನಾಥ 30 ಮಕ್ಕಳು ಇದ್ದಾರೆ. ಅವರಿಗಾಗಿ ಶುದ್ಧೀಕರಿಸಿದ ನೀರನ್ನೇ ತರಿಸಿಕೊಂಡು ಅದನ್ನೇ ಬಳಕೆ ಮಾಡುತ್ತಿದ್ದೇವೆ’ ಎಂದು ಹೇಳಿದರು.