<p><strong>ಮಡಿಕೇರಿ</strong>: ಕೇವಲ ಹತ್ತೇ ದಿನಗಳ ಅಂತರದಲ್ಲಿ ಮತ್ತೊಂದು ಕಾಡಾನೆಯನ್ನು ವಿರಾಜಪೇಟೆ ತಾಲ್ಲೂಕಿನಲ್ಲಿ ಸೆರೆ ಹಿಡಿಯಲಾಗಿದೆ. ಜನರಿಗೆ ಉಪಟಳ ನೀಡುತ್ತಿತ್ತು ಎಂಬ ಕಾರಣಕ್ಕೆ ಈ ಕಾಡಾನೆಗಳು ಸೆರೆಯಾಗಿವೆ. ಮಾರ್ಚ್ ತಿಂಗಳಿನ 22 ದಿನಗಳಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮೂವರು ಮೃತಪಟ್ಟಿದ್ದರೆ, ಎರಡು ಕಾಡಾನೆಗಳು ಸೆರೆಯಾಗಿವೆ.</p>.<p>ಈ ಬಾರಿಯೂ 110ಕ್ಕೂ ಅಧಿಕ ಮಂದಿ ಸಿಬ್ಬಂದಿ, 6 ಸಾಕಾನೆಗಳ ನೆರವಿನಿಂದ ಚೆಂಬೆಬೆಳ್ಳೂರು ಸಮೀಪ ಸೆರೆ ಹಿಡಿದಿದ್ದಾರೆ.</p>.<p>ವರ್ಷಗಳು ಉರುಳಿದಂತೆ ಸೆರೆ ಹಿಡಿಯುವ ಕಾಡಾನೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆನೆ ಶಿಬಿರಗಳೂ ತುಂಬಿ ತುಳುಕುತ್ತಿವೆ. ಹೊಸ ಹೊಸ ಶಿಬಿರಗಳನ್ನು ತೆರೆಯಲಾಗುತ್ತಿದೆ.</p>.<p>ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರ ಒಂದರಲ್ಲೇ 28 ಆನೆಗಳಿವೆ. ಇತ್ತೀಚಿನ ವರ್ಷಗಳಲ್ಲಿ ತೆರೆಯಲಾದ ಹಾರಂಗಿ ಸಾಕಾನೆ ಶಿಬಿರದಲ್ಲಿ 4 ಆನೆಗಳಿವೆ. ನಾಗರಹೊಳೆಯ ಮತ್ತಿಗೋಡು ಶಿಬಿರದಲ್ಲಿ 15 ಆನೆಗಳಿವೆ. ಹೀಗೆ, ಶಿಬಿರ ಸೇರುವ ಆನೆಗಳ ಸಂಖ್ಯೆ ಹೆಚ್ಚುತ್ತಲೇ ಇವೆ.</p>.<p>ಈ ಬಗೆಯಲ್ಲಿ ಕಾಡಾನೆಗಳನ್ನೆಲ್ಲ ಸೆರೆ ಹಿಡಿಯುತ್ತಾ ಹೋದರೆ ಸಾಕಾನೆಗಳ ಶಿಬಿರಗಳ ಸಂಖ್ಯೆಯೂ ಬೆಳೆಯುತ್ತದೆ. ಇವುಗಳನ್ನೆಲ್ಲ ಸಾಕಲು ಹೆಚ್ಚಿನ ಹೊರೆಯೂ ಬೀಳುತ್ತದೆ. ಹಾಗಾಗಿ, ಕಾಡಾನೆ ಸೆರೆಗಿಂತ ಪರ್ಯಾಯ ಮಾರ್ಗಗಳನ್ನು ಶೋಧಿಸಬೇಕಿದೆ.</p>.<p>ಕಾಡಾನೆ ಸೆರೆಯೂ ಹೇಳಿಕೊಳ್ಳುವಷ್ಟು ಸುಲಭವಿಲ್ಲ. ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಸೆರೆ ಹಿಡಿಯುವವರ ತೋಟವನ್ನಂತೂ ನೋಡುವುದೇ ಬೇಡ. ಅಷ್ಟರಮಟ್ಟಿಗೆ ತೋಟಗಳು ಹಾಳಾಗಿರುತ್ತವೆ. ಕಾಡಾನೆಯ ಜೊತೆ ಜೊತೆಗೆ ಸಾಕಾನೆಗಳೂ ತೋಟಗಳಲ್ಲಿ ಓಡಾಡುವುದರಿಂದ ಸಾಕಷ್ಟು ನಷ್ಟ ಮಾಲೀಕರಿಗೂ ತಗುಲುತ್ತದೆ.</p>.<p>ಈಗ ಸೆರೆ ಹಿಡಿದ ಕಾಡಾನೆ ಕೆಲ ವರ್ಷಗಳಿಂದ ಅಲ್ಲಿಯೇ ಸುತ್ತಾಡುತ್ತಿತ್ತು. ಎಷ್ಟೇ ಓಡಿಸಿದರೂ ಮರಳಿ ಕಾಡಿಗೆ ಹೋಗುತ್ತಿರಲಿಲ್ಲ. ಈ ಕಾಡಾನೆಯ ದಾಳಿಗೆ ಸಿಲುಕಿ ಯಾರೊಬ್ಬರೂ ಮೃತಪಟ್ಟಿರಲಿಲ್ಲ. ಹೀಗಾಗಿಯೇ 3 ತಿಂಗಳ ಹಿಂದೆ ಈ ಕಾಡಾನೆ ಸೆರೆಗೆ ಪ್ರಸ್ತಾವ ಸಲ್ಲಿಸಿದರೂ ಅಧಿಕಾರಿಗಳು ಅನುಮತಿ ನೀಡಲು ಒಪ್ಪಿರಲಿಲ್ಲ.</p>.<p>ಕೆಲವರನ್ನು ಕಾಡಾನೆ ಅಡ್ಡಾದಿಡ್ಡಿ ಅಟ್ಟಾಡಿಸಲು ಇತ್ತೀಚೆಗೆ ಶುರು ಮಾಡಿತ್ತು. ಕೂದಲೆಳೆ ಅಂತರದಿಂದ ಕೆಲವರು ಪಾರಾಗಿದ್ದರು. ಜೊತೆಗೆ, ಅಪಾರ ಪ್ರಮಾಣದ ಫಸಲು ನಾಶವಾಗಿತ್ತು. ಈ ಕಾರಣಕ್ಕೆ ಕಾಡಾನೆಯನ್ನು ಸೆರೆ ಹಿಡಿಯಲೇ ಬೇಕು ಎಂಬ ಒತ್ತಡ ಹೆಚ್ಚಾಗಿತ್ತು.</p>.<p>ಜನವರಿಯಿಂದ ಇಲ್ಲಿಯವರೆಗೆ ಕಾಡಾನೆ ದಾಳಿಗೆ ಸಿಲುಕಿ ಕೊಡಗು ಜಿಲ್ಲೆಯಲ್ಲಿ ಒಟ್ಟು 5 ಮಂದಿ ಮೃತಪಟ್ಟಿದ್ದರು. ಅದರಲ್ಲೂ ಮಾರ್ಚ್ ತಿಂಗಳಿನಲ್ಲಿ 3 ಮಂದಿ ಮೃತಪಟ್ಟಿದ್ದರು. ಇದು ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು. ಹಾಗಾಗಿ, ಮತ್ತೊಂದು ಸಾವು ಸಂಭವಿಸಬಾರದು ಎಂಬ ಉದ್ದೇಶಕ್ಕೆ ಕಾಡಾನೆ ಸೆರೆ ಹಿಡಿಯಿರಿ ಎಂಬ ಒತ್ತಡ ಹೆಚ್ಚಿತ್ತು.</p>.<p>ಮೂರು ದಿನಗಳ ಹಿಂದೆ ಈ ಕಾಡಾನೆ ಸೆರೆಗೆ ಕೊನೆಗೂ ಹಿರಿಯ ಅಧಿಕಾರಿಗಳು ಒಪ್ಪಿಗೆ ನೀಡಿದರು. ಕೂಡಲೇ ಕಾರ್ಯತತ್ಪರರಾದ ಅರಣ್ಯ ಇಲಾಖೆ ಸಿಬ್ಬಂದಿ ಸಾಕಾನೆಗಳನ್ನು ಬಳಸಿಕೊಂಡು ಕಾಡಾನೆಯನ್ನು ಸೆರೆ ಹಿಡಿದರು.</p>.<p>ಕಾಡಾನೆ ಸೆರೆ ಹಿಡಿಯುವುದೊಂದೇ ಕಾಡಾನೆ– ಮಾನವ ಸಂಘರ್ಷ ತಡೆಗಟ್ಟುವ ಪರಿಹಾರವಲ್ಲ. ಇದರೊಂದಿಗೆ ಇನ್ನಿತರ ಪರಿಣಾಮಕಾರಿ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಕೈಗೊಂಡು ಕಾಡಾನೆಗಳು ಕಾಡಿನಿಂದ ಹೊರಬಾರದಂತೆ ತಡೆಯಬೇಕಿದೆ ಎಂದು ಸ್ಥಳೀಯರು ಹೇಳುತ್ತಾರೆ.</p>.<p>ದುಬಾರೆ ಶಿಬಿರದಲ್ಲಿವೆ 28 ಆನೆಗಳು ಮತ್ತಿಗೋಡು ಶಿಬಿರದಲ್ಲಿವೆ 15 ಗಜಗಳು ಹಾರಂಗಿ ಶಿಬಿರದಲ್ಲೂ ಇವೆ 4 ಆನೆಗಳು</p>.<p> <strong>ಮತ್ತೊಂದು ಕಾಡಾನೆ ಸೆರೆ </strong></p><p>ಸಿದ್ದಾಪುರ: ಇಲ್ಲಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಕುಕ್ಲೂರು ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಯನ್ನು ಮೊದಲಿಗೆ ಗುರುತಿಸಲಾಯಿತು. ಅಂದಾಜು 35 ವರ್ಷ ಪ್ರಾಯದ ಈ ಕಾಡಾನೆಯನ್ನು ಸೆರೆ ಹಿಡಿಯಲು ಮುಂದಾದರು. ವನ್ಯಜೀವಿ ವೈದ್ಯಾಧಿಕಾರಿ ಡಾ.ರಮೇಶ್ ಹಾಗೂ ಶಾರ್ಪ್ ಶೂಟರ್ ಕನ್ನಂಡ ರಂಜನ್ ಅರಿವಳಿಕೆ ಚುಚ್ಚುಮದ್ದು ನೀಡಿದರು. ಸಾಕಾನೆಗಳಾದ ಮತ್ತಿಗೋಡು ಶಿಬಿರದ ಅಭಿಮನ್ಯು ಮಹೇಂದ್ರ ಭೀಮ ಶ್ರೀಕಂಠ ದುಬಾರೆ ಶಿಬಿರದ ಕಂಜನ್ ಹಾಗೂ ಹಾರಂಗಿ ಶಿಬಿರದ ಲಕ್ಷ್ಮಣ ಆನೆಗಳನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಯಿತು. ಈ ಸಾಕಾನೆಗಳ ಸಹಕಾರದಿಂದ ಕಾಡಾನೆಯನ್ನು ತೋಟದಿಂದ ಹೊರಕ್ಕೆ ತರಲಾಯಿತು. ಬಳಿಕ ಕಾಡಾನೆಯನ್ನು ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಕಾರ್ಯಾಚರಣೆಯಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ಡಿಸಿಎಫ್ ಗಳಾದ ಜಗನ್ನಾಥ್ ಅಭಿಷೇಕ್ ಎ.ಸಿ.ಎಫ್ ಗಳಾದ ಗೋಪಾಲ್ ಸೆಂಥಿಲ್ಕುಮಾರ್ ತಹಸೀನ್ ವಿರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಹಾಗೂ ಉಪವಲಯ ಅರಣ್ಯ ಅಧಿಕಾರಿಗಳಾದ ರಾಘವ ಶ್ರೀನಿವಾಸ ಲೋಕೇಶ್ ಶಶಿ ಆರ್.ಆರ್.ಟಿ ಆನೆ ಕಾರ್ಯಪಡೆ ತಂಡದ ಸಿಬ್ಬಂದಿ ಪಾಲ್ಗೊಂಡಿದ್ದರು. ಈಚೆಗೆ ಸಿದ್ದಾಪುರ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಸಲಗವನ್ನು ಸೆರೆಹಿಡಿಯಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ಕೇವಲ ಹತ್ತೇ ದಿನಗಳ ಅಂತರದಲ್ಲಿ ಮತ್ತೊಂದು ಕಾಡಾನೆಯನ್ನು ವಿರಾಜಪೇಟೆ ತಾಲ್ಲೂಕಿನಲ್ಲಿ ಸೆರೆ ಹಿಡಿಯಲಾಗಿದೆ. ಜನರಿಗೆ ಉಪಟಳ ನೀಡುತ್ತಿತ್ತು ಎಂಬ ಕಾರಣಕ್ಕೆ ಈ ಕಾಡಾನೆಗಳು ಸೆರೆಯಾಗಿವೆ. ಮಾರ್ಚ್ ತಿಂಗಳಿನ 22 ದಿನಗಳಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮೂವರು ಮೃತಪಟ್ಟಿದ್ದರೆ, ಎರಡು ಕಾಡಾನೆಗಳು ಸೆರೆಯಾಗಿವೆ.</p>.<p>ಈ ಬಾರಿಯೂ 110ಕ್ಕೂ ಅಧಿಕ ಮಂದಿ ಸಿಬ್ಬಂದಿ, 6 ಸಾಕಾನೆಗಳ ನೆರವಿನಿಂದ ಚೆಂಬೆಬೆಳ್ಳೂರು ಸಮೀಪ ಸೆರೆ ಹಿಡಿದಿದ್ದಾರೆ.</p>.<p>ವರ್ಷಗಳು ಉರುಳಿದಂತೆ ಸೆರೆ ಹಿಡಿಯುವ ಕಾಡಾನೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆನೆ ಶಿಬಿರಗಳೂ ತುಂಬಿ ತುಳುಕುತ್ತಿವೆ. ಹೊಸ ಹೊಸ ಶಿಬಿರಗಳನ್ನು ತೆರೆಯಲಾಗುತ್ತಿದೆ.</p>.<p>ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರ ಒಂದರಲ್ಲೇ 28 ಆನೆಗಳಿವೆ. ಇತ್ತೀಚಿನ ವರ್ಷಗಳಲ್ಲಿ ತೆರೆಯಲಾದ ಹಾರಂಗಿ ಸಾಕಾನೆ ಶಿಬಿರದಲ್ಲಿ 4 ಆನೆಗಳಿವೆ. ನಾಗರಹೊಳೆಯ ಮತ್ತಿಗೋಡು ಶಿಬಿರದಲ್ಲಿ 15 ಆನೆಗಳಿವೆ. ಹೀಗೆ, ಶಿಬಿರ ಸೇರುವ ಆನೆಗಳ ಸಂಖ್ಯೆ ಹೆಚ್ಚುತ್ತಲೇ ಇವೆ.</p>.<p>ಈ ಬಗೆಯಲ್ಲಿ ಕಾಡಾನೆಗಳನ್ನೆಲ್ಲ ಸೆರೆ ಹಿಡಿಯುತ್ತಾ ಹೋದರೆ ಸಾಕಾನೆಗಳ ಶಿಬಿರಗಳ ಸಂಖ್ಯೆಯೂ ಬೆಳೆಯುತ್ತದೆ. ಇವುಗಳನ್ನೆಲ್ಲ ಸಾಕಲು ಹೆಚ್ಚಿನ ಹೊರೆಯೂ ಬೀಳುತ್ತದೆ. ಹಾಗಾಗಿ, ಕಾಡಾನೆ ಸೆರೆಗಿಂತ ಪರ್ಯಾಯ ಮಾರ್ಗಗಳನ್ನು ಶೋಧಿಸಬೇಕಿದೆ.</p>.<p>ಕಾಡಾನೆ ಸೆರೆಯೂ ಹೇಳಿಕೊಳ್ಳುವಷ್ಟು ಸುಲಭವಿಲ್ಲ. ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಸೆರೆ ಹಿಡಿಯುವವರ ತೋಟವನ್ನಂತೂ ನೋಡುವುದೇ ಬೇಡ. ಅಷ್ಟರಮಟ್ಟಿಗೆ ತೋಟಗಳು ಹಾಳಾಗಿರುತ್ತವೆ. ಕಾಡಾನೆಯ ಜೊತೆ ಜೊತೆಗೆ ಸಾಕಾನೆಗಳೂ ತೋಟಗಳಲ್ಲಿ ಓಡಾಡುವುದರಿಂದ ಸಾಕಷ್ಟು ನಷ್ಟ ಮಾಲೀಕರಿಗೂ ತಗುಲುತ್ತದೆ.</p>.<p>ಈಗ ಸೆರೆ ಹಿಡಿದ ಕಾಡಾನೆ ಕೆಲ ವರ್ಷಗಳಿಂದ ಅಲ್ಲಿಯೇ ಸುತ್ತಾಡುತ್ತಿತ್ತು. ಎಷ್ಟೇ ಓಡಿಸಿದರೂ ಮರಳಿ ಕಾಡಿಗೆ ಹೋಗುತ್ತಿರಲಿಲ್ಲ. ಈ ಕಾಡಾನೆಯ ದಾಳಿಗೆ ಸಿಲುಕಿ ಯಾರೊಬ್ಬರೂ ಮೃತಪಟ್ಟಿರಲಿಲ್ಲ. ಹೀಗಾಗಿಯೇ 3 ತಿಂಗಳ ಹಿಂದೆ ಈ ಕಾಡಾನೆ ಸೆರೆಗೆ ಪ್ರಸ್ತಾವ ಸಲ್ಲಿಸಿದರೂ ಅಧಿಕಾರಿಗಳು ಅನುಮತಿ ನೀಡಲು ಒಪ್ಪಿರಲಿಲ್ಲ.</p>.<p>ಕೆಲವರನ್ನು ಕಾಡಾನೆ ಅಡ್ಡಾದಿಡ್ಡಿ ಅಟ್ಟಾಡಿಸಲು ಇತ್ತೀಚೆಗೆ ಶುರು ಮಾಡಿತ್ತು. ಕೂದಲೆಳೆ ಅಂತರದಿಂದ ಕೆಲವರು ಪಾರಾಗಿದ್ದರು. ಜೊತೆಗೆ, ಅಪಾರ ಪ್ರಮಾಣದ ಫಸಲು ನಾಶವಾಗಿತ್ತು. ಈ ಕಾರಣಕ್ಕೆ ಕಾಡಾನೆಯನ್ನು ಸೆರೆ ಹಿಡಿಯಲೇ ಬೇಕು ಎಂಬ ಒತ್ತಡ ಹೆಚ್ಚಾಗಿತ್ತು.</p>.<p>ಜನವರಿಯಿಂದ ಇಲ್ಲಿಯವರೆಗೆ ಕಾಡಾನೆ ದಾಳಿಗೆ ಸಿಲುಕಿ ಕೊಡಗು ಜಿಲ್ಲೆಯಲ್ಲಿ ಒಟ್ಟು 5 ಮಂದಿ ಮೃತಪಟ್ಟಿದ್ದರು. ಅದರಲ್ಲೂ ಮಾರ್ಚ್ ತಿಂಗಳಿನಲ್ಲಿ 3 ಮಂದಿ ಮೃತಪಟ್ಟಿದ್ದರು. ಇದು ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು. ಹಾಗಾಗಿ, ಮತ್ತೊಂದು ಸಾವು ಸಂಭವಿಸಬಾರದು ಎಂಬ ಉದ್ದೇಶಕ್ಕೆ ಕಾಡಾನೆ ಸೆರೆ ಹಿಡಿಯಿರಿ ಎಂಬ ಒತ್ತಡ ಹೆಚ್ಚಿತ್ತು.</p>.<p>ಮೂರು ದಿನಗಳ ಹಿಂದೆ ಈ ಕಾಡಾನೆ ಸೆರೆಗೆ ಕೊನೆಗೂ ಹಿರಿಯ ಅಧಿಕಾರಿಗಳು ಒಪ್ಪಿಗೆ ನೀಡಿದರು. ಕೂಡಲೇ ಕಾರ್ಯತತ್ಪರರಾದ ಅರಣ್ಯ ಇಲಾಖೆ ಸಿಬ್ಬಂದಿ ಸಾಕಾನೆಗಳನ್ನು ಬಳಸಿಕೊಂಡು ಕಾಡಾನೆಯನ್ನು ಸೆರೆ ಹಿಡಿದರು.</p>.<p>ಕಾಡಾನೆ ಸೆರೆ ಹಿಡಿಯುವುದೊಂದೇ ಕಾಡಾನೆ– ಮಾನವ ಸಂಘರ್ಷ ತಡೆಗಟ್ಟುವ ಪರಿಹಾರವಲ್ಲ. ಇದರೊಂದಿಗೆ ಇನ್ನಿತರ ಪರಿಣಾಮಕಾರಿ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಕೈಗೊಂಡು ಕಾಡಾನೆಗಳು ಕಾಡಿನಿಂದ ಹೊರಬಾರದಂತೆ ತಡೆಯಬೇಕಿದೆ ಎಂದು ಸ್ಥಳೀಯರು ಹೇಳುತ್ತಾರೆ.</p>.<p>ದುಬಾರೆ ಶಿಬಿರದಲ್ಲಿವೆ 28 ಆನೆಗಳು ಮತ್ತಿಗೋಡು ಶಿಬಿರದಲ್ಲಿವೆ 15 ಗಜಗಳು ಹಾರಂಗಿ ಶಿಬಿರದಲ್ಲೂ ಇವೆ 4 ಆನೆಗಳು</p>.<p> <strong>ಮತ್ತೊಂದು ಕಾಡಾನೆ ಸೆರೆ </strong></p><p>ಸಿದ್ದಾಪುರ: ಇಲ್ಲಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಕುಕ್ಲೂರು ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಯನ್ನು ಮೊದಲಿಗೆ ಗುರುತಿಸಲಾಯಿತು. ಅಂದಾಜು 35 ವರ್ಷ ಪ್ರಾಯದ ಈ ಕಾಡಾನೆಯನ್ನು ಸೆರೆ ಹಿಡಿಯಲು ಮುಂದಾದರು. ವನ್ಯಜೀವಿ ವೈದ್ಯಾಧಿಕಾರಿ ಡಾ.ರಮೇಶ್ ಹಾಗೂ ಶಾರ್ಪ್ ಶೂಟರ್ ಕನ್ನಂಡ ರಂಜನ್ ಅರಿವಳಿಕೆ ಚುಚ್ಚುಮದ್ದು ನೀಡಿದರು. ಸಾಕಾನೆಗಳಾದ ಮತ್ತಿಗೋಡು ಶಿಬಿರದ ಅಭಿಮನ್ಯು ಮಹೇಂದ್ರ ಭೀಮ ಶ್ರೀಕಂಠ ದುಬಾರೆ ಶಿಬಿರದ ಕಂಜನ್ ಹಾಗೂ ಹಾರಂಗಿ ಶಿಬಿರದ ಲಕ್ಷ್ಮಣ ಆನೆಗಳನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಯಿತು. ಈ ಸಾಕಾನೆಗಳ ಸಹಕಾರದಿಂದ ಕಾಡಾನೆಯನ್ನು ತೋಟದಿಂದ ಹೊರಕ್ಕೆ ತರಲಾಯಿತು. ಬಳಿಕ ಕಾಡಾನೆಯನ್ನು ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಕಾರ್ಯಾಚರಣೆಯಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ಡಿಸಿಎಫ್ ಗಳಾದ ಜಗನ್ನಾಥ್ ಅಭಿಷೇಕ್ ಎ.ಸಿ.ಎಫ್ ಗಳಾದ ಗೋಪಾಲ್ ಸೆಂಥಿಲ್ಕುಮಾರ್ ತಹಸೀನ್ ವಿರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಹಾಗೂ ಉಪವಲಯ ಅರಣ್ಯ ಅಧಿಕಾರಿಗಳಾದ ರಾಘವ ಶ್ರೀನಿವಾಸ ಲೋಕೇಶ್ ಶಶಿ ಆರ್.ಆರ್.ಟಿ ಆನೆ ಕಾರ್ಯಪಡೆ ತಂಡದ ಸಿಬ್ಬಂದಿ ಪಾಲ್ಗೊಂಡಿದ್ದರು. ಈಚೆಗೆ ಸಿದ್ದಾಪುರ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಸಲಗವನ್ನು ಸೆರೆಹಿಡಿಯಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>