ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗಣಗೂರಿನ ಪಾರ್ವತಿ ಶೇಖರ್ ಅವರ ಮನೆಯ ಕಿಟಕಿ ಸರಳುಗಳನ್ನು ಮುರಿದ ಕಾಡಾನೆ ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳನ್ನು ಸೇವಿಸಲು ಯತ್ನಿಸಿದೆ. ಈ ವೇಳೆ ಮನೆಯಲ್ಲಿದ್ದವರು ಕಿರುಚಿದ್ದರಿಂದ ಆನೆ ಅಲ್ಲಿಂದ ಹೊರಟಿದೆ.
ಹೋಗುವಾಗ ಆನೆಯು ಅವರ ಮನೆಯ ಗೋಡೆ, ಕಿಟಕಿ, ಕೊಳವೆಬಾವಿ ಪೈಪ್, ಅಡಿಕೆ, ತೆಂಗು, ಕಾಫಿ ಗಿಡಗಳನ್ನ ನಾಶಪಡಿಸಿದೆ.
ಅದೇ ಗ್ರಾಮದ ಎಂ.ಎನ್ ಚಂದ್ರಪ್ಪ ಹಾಗೂ ಕುದುಪಜೆ ನಾಗೇಶ್ ಅವರ ಜಮೀನಿಗೂ ಕಾಲಿಟ್ಟ ಕಾಡಾನೆಗಳು ಶುಂಠಿ,ತೆಂಗು,ಅಡಿಕೆ,ಬಾಳೆ,ಕಾಫಿ ಸೇರಿದಂತೆ ರೈತರು ಬೆಳೆದ ಬೆಳೆಗಳನ್ನ ನಾಶಪಡಿಸಿದೆ.