ಶನಿವಾರಸಂತೆ: ಹೋಬಳಿಯಾದ್ಯಂತ ಹಳ್ಳಿಗಳಲ್ಲಿ ರೈತರ ಗದ್ದೆ- ತೋಟಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿದ್ದ ಕಾಡಾನೆಗಳ ಹಿಂಡು ಇದೀಗ ಪಟ್ಟಣದತ್ತ ಮೊಗ ಮಾಡಿವೆ. ರಾತ್ರಿ, ಮುಂಜಾನೆ ದಾಳಿಯಿಟ್ಟು ಮನೆಯಂಗಳ ಹಾಗೂ ಹಿತ್ತಲಿನಲ್ಲಿರುವ ಬೆಳೆಗಳನ್ನು ಎಳೆದು ಹಾಕಿ ತಿಂದು, ತುಳಿದು ಹಾನಿಪಡಿಸುತ್ತಿದ್ದು ಜನತೆ ಭಯಭೀತರಾಗಿದ್ದಾರೆ.