ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ಶನಿವಾರ ನಡೆದ ‘ಯುವ ಕಲೋತ್ಸವ’ದಲ್ಲಿ ಯುವಕ, ಯುವತಿಯರು ಸಂಭ್ರಮಿಸಿದರು. ಕರವಲೆ ಭಗವತಿ ದೇಗುಲದಿಂದ ಗಾಂಧಿ ಮೈದಾನದವರೆಗೆ ನಡೆದ ಬೈಕ್ ರ್ಯಾಲಿಯಲ್ಲಿ ನೂರಾರು ಮಂದಿ ಭಾಗಿಯಾದರು. ಗಾಂಧಿ ಮೈದಾನದಲ್ಲಿ ನಡೆದ ಬೈಕ್ ಸ್ಟಂಟ್ ಸಾಹಸ ಪ್ರದರ್ಶನವು ಸಾಹಸಪ್ರಿಯರಿಗೆ ರಸಗವಳವಾಗಿ ಪರಿಣಮಿಸಿತು.