ಮಡಿಕೇರಿ: ಮಡಿಕೇರಿ ದಸರಾ ಅಂಗವಾಗಿ ಅ.1ರಂದು ನಡೆಯಲಿರುವ ‘ಯುವ ಕಲೋತ್ಸವ’ದ ಪ್ರಚಾರ ಕಾರ್ಯವು ಶುಕ್ರವಾರ ಇಲ್ಲಿನ ಎಫ್ಎಂಸಿ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮ ಆಯೋಜಕ ಸಂಸ್ಥೆ ಕಿಂಬರ್ಲಿ ರಿಕ್ರಿಯೇಷನ್ನ ಪದಾಧಿಕಾರಿಗಳು ಯುವ ದಸರೆಯ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಸಂಸ್ಥೆ ಅಧ್ಯಕ್ಷ ಮದನ್ ಮಾತನಾಡಿ, ‘ಈ ಬಾರಿಯ ಯುವ ಕಲೋತ್ಸವ ವಿಭಿನ್ನವಾಗಿ ಆಯೋಜಿಸಲು ತೀರ್ಮಾನಿಸಿದ್ದು ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಭಗವತಿ ನಗರದಿಂದ ಗಾಂಧಿ ಮೈದಾನದವರೆಗೆ ಬೈಕ್ ರ್ಯಾಲಿ ಆಯೋಜಿಸಿದ್ದು, ಅದರಲ್ಲಿ ಕೊಡಗಿನ ಪ್ರವಾಸೋದ್ಯಮದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ಮೋನಿಷ್, ದಿನೇಶ್, ಪ್ರಜ್ಞಾ, ವಿನಯ್ ಕುಮಾರ್, ರಂಜಿತ್, ಸುಜಿತ್ ಇದ್ದರು.