ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಪಾತಕ್ಕೆ ಉರುಳಿದ ಟಿಪ್ಪರ್: ಅಪಾಯದಿಂದ ಪಾರು.

Last Updated 3 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಸೋಮವಾರಪೇಟೆ: ಶಾಂತಳ್ಳಿ ಸಮೀಪದ ಪಟ್ಟಣಕೊಲ್ಲಿ ಎಂಬಲ್ಲಿ ಟಿಪ್ಪರ್ ವಾಹನವೊಂದು ರಸ್ತೆ ಬದಿಯ ಪ್ರತಾತಕ್ಕೆ ಉರುಳಿಬಿದ್ದ ಘಟನೆ ಸಂಭವಿಸಿದ್ದು, ವಾಹನದಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪಟ್ಟಣಕೊಲ್ಲಿ ತಿರುವಿನಲ್ಲಿ ಎದುರಾದ ಸರ್ಕಾರಿ ಬಸ್ ಗೆ ಸ್ಥಳಾವಕಾಶ ಕಲ್ಪಿಸಲು ರಸ್ತೆಯ ಪಕ್ಕಕ್ಕೆ ಟಿಪ್ಪರ್‌ ನಿಲ್ಲಿಸಿದ್ದರು. ಈ ಸಂದರ್ಭ, ಏಕಾಏಕಿ ಮಣ್ಣು ಕುಸಿದು ಟಿಪ್ಪರ್ ಪ್ರಪಾತಕ್ಕೆ ಬಿದ್ದಿದೆ.

ಟಿ.ಆರ್. ಪುರುಷೋತ್ತಮ್ ಎಂಬುವವರಿಗೆ ಸೇರಿದ ಟಿಪ್ಪರ್ ವಾಹನ ಅವಘಾತಕ್ಕೀಡಾಗಿದ್ದು, ವಾಹನದೊಳಗಿದ್ದ ಚಾಲಕ ಸೇರಿದಂತೆ ಇತರ ಇಬ್ಬರು ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.

ಟಿಪ್ಪರ್ ಚಾಲಕ ಉದಯಕುಮಾರ್ ವಾಹನದಿಂದ ಜಿಗಿದರೆ, ಕಾರ್ಮಿಕರಾದ ಹಾವೇರಿ ಜಿಲ್ಲೆಯ ಯಲ್ಲಪ್ಪ ಮತ್ತು ನವಾಜ್ ಟಿಪ್ಪರ್‌ನೊಳಗೆ ಸಿಲುಕಿಕೊಂಡು ಕಂದಕಕ್ಕೆ ಉರುಳಿದ್ದಾರೆ. ಪರಿಣಾಮ ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT