ಜ.20ರಂದು ನಗರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕರು ನೀಡಿದ ದೂರಿನನ್ವಯ ಆರೋಪಿ ರಹಮತ್ ನಗರದ ಅಬ್ದುಲ್ ಶಹಬಾಷ್, ಬ್ಯಾಂಕ್ ಗ್ರಾಹಕ ಜಬೀವುಲ್ಲಾ ಎಂಬುವರಿಗೆ ಬ್ಯಾಂಕ್ ನೌಕರನೆಂದು ನಂಬಿಸಿದ್ದಾನೆ. ₹ 19,15,000 ಸಾಲ ಮತ್ತು ಸಹಾಯಧನ ಕೊಡಿಸುವುದಾಗಿ ಹೇಳಿ ‘ಓನ್ ಕಾಂಟ್ರಿಬೂಷನ್’, ಆದಾಯ ತೆರಿಗೆ, ಪ್ರೊಸೆಸಿಂಗ್ ಶುಲ್ಕ ಇತ್ಯಾದಿಗಳ ನೆಪದಲ್ಲಿ ₹ 6,11,800 ಅನ್ನು ಹಲವಾರು ಬಾರಿ ತನ್ನ ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದಾನೆ. ಅವರು ದೂರಿನ ಮೇರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.