ಕೋಲಾರ: ತಾಲ್ಲೂಕಿನ ಚಾಕರಸನಹಳ್ಳಿ ಮಾರ್ಗವಾಗಿ ಲಾರಿಗಳಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 20 ಹಸುಗಳ ಪೈಕಿ 5 ಹಸು ಮೃತಪಟ್ಟಿದ್ದು, ಗ್ರಾಮಸ್ಥರು ಲಾರಿಗಳನ್ನು ಅಡ್ಡಗಟ್ಟಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ತಾಲ್ಲೂಕಿನ ವಕ್ಕಲೇರಿ ಗ್ರಾಮದ ವೆಂಕಟೇಶ್ಗೌಡ ಎಂಬುವರ ತೋಟದ ಮನೆಯಿಂದ ಸೋಮವಾರ ರಾತ್ರಿ 20 ಹಸುಗಳನ್ನು ಎರಡು ಲಾರಿಗಳಲ್ಲಿ ಸಾಗಿಸಲಾಗುತ್ತಿತ್ತು. ಲಾರಿಗಳು ಗ್ರಾಮದ ಬಳಿ ಬರುತ್ತಿದ್ದಂತೆ ಚಾಕರಸನಹಳ್ಳಿ ಗ್ರಾಮಸ್ಥರು ಅಡ್ಡಗಟ್ಟಿ ವೇಮಗಲ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಲಾರಿಗಳಲ್ಲಿ ನಿಗದಿತ ಭಾರ ಮಿತಿ ಮೀರಿ ಉಸಿರಾಡಲು ಸಾಧ್ಯವಾಗದಂತೆ ಹಸುಗಳನ್ನು ತುಂಬಿದ್ದರಿಂದ 5 ಹಸುಗಳು ಉಸಿರುಗಟ್ಟಿ ಮೃತಪಟ್ಟಿವೆ. ಜತೆಗೆ ಹಸುಗಳಿಗೆ ಸಮರ್ಪಕವಾಗಿ ಮೇವು ಕೊಟ್ಟಿರಲಿಲ್ಲ. ಹೀಗಾಗಿ ಅವು ಮೃತಪಟ್ಟಿವೆ ಎಂದು ಗ್ರಾಮಸ್ಥರು ಆರೋಪಿಸಿದರು.
ಉಳಿದ 15 ಹಸುಗಳನ್ನು ರಕ್ಷಿಸಿರುವ ವೇಮಗಲ್ ಪೊಲೀಸರು ಲಾರಿಗಳನ್ನು ವಶಕ್ಕೆ ಪಡೆದು ವೆಂಕಟೇಶ್ಗೌಡ,ಚಾಲಕರಾದ ಇದಾಯತ್ ಮತ್ತು ಪ್ರಸಾದ್ ವಿರುದ್ಧ ಪ್ರಕರಣ ದಾಖಲಿದ್ದಾರೆ.