ಬೆಂಗಳೂರು: ಪೀಣ್ಯದಾಸರಹಳ್ಳಿಯ ಕೆಂಪೇಗೌಡನಗರ ನಿವಾಸಿ ಕಿಟ್ಟಪ್ಪಗೌಡ್ರು (52) ನಿಧನರಾಗಿದ್ದಾರೆ. ಅವರು ದಾಸರಹಳ್ಳಿಯ ಗಂಧದಗುಡಿ ಕನ್ನಡ ಯುವಕರ ಸಂಘದ ಗೌರವಾಧ್ಯಕ್ಷರಾಗಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ಬುಧವಾರ ಹುಟ್ಟೂರಾದ ಹಾಸನಜಿಲ್ಲೆಯ ನುಗ್ಗೇನಹಳ್ಳಿಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಗಂಧದಗುಡಿ ನಾಗರಾಜು ತಿಳಿಸಿದರು. ಸಂಪರ್ಕಕ್ಕೆ 9620560304
ಪಾಲಾಕ್ಷ
ಬೆಂಗಳೂರು: ‘ಎಕ್ಸೈಜ್ ವಾಯ್ಸ್’ ಪತ್ರಿಕೆಯ ಸಂಪಾದಕ ಆರ್.ಪಾಲಾಕ್ಷ (60) ಹೃದಯಾಘಾತದಿಂದ ಮಂಗಳವಾರ ಬೆಳಿಗ್ಗೆ ನಿಧನರಾದರು.
ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಅವರು, ಪಟ್ಟಣಗೆರೆ ಪಂಚಾಯಿತಿಯ ಮಾಜಿ ಅಧ್ಯಕ್ಷ, ನಾಯಂಡಹಳ್ಳಿಯ ದಿವಂಗತ ಬಿ. ರೇವಣ್ಣ ಅವರ ಪುತ್ರರಾಗಿದ್ದರು.
ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.