ಕೋಲಾರ: ತಾಲ್ಲೂಕಿನ ಬೇತಮಂಗಳ ರಸ್ತೆಯ ಶಾಪೂರು ಕ್ರಾಸ್ ಸಮೀಪ ಗುರುವಾರ ಸಂಭವಿಸಿದ ಕಾರು ಅಪಘಾತದಲ್ಲಿ ಪತ್ರಕರ್ತ ಎಸ್.ಲಕ್ಷ್ಮಿಪತಿ (42) ಮೃತಪಟ್ಟಿದ್ದಾರೆ.
ಕೋಲಾರಕ್ಕೆ ಬರುವ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದೆ. ಸಾಗರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ನವೀದ್, ಶಿವು, ಮುನಿರಾಜು ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಕ್ಷ್ಮಿಪತಿ ‘ಕೋಲಾರ ಮಿಂಚು’ ಎಂಬ ಸ್ಥಳೀಯ ಪತ್ರಿಕೆಯ ಸಂಪಾದಕರಾಗಿದ್ದರು.