‘ಸರಿಗಮಪ ಸೀಸನ್ 14’ ಕನ್ನಡ ಕಿರುತೆರೆ ರಿಯಾಲಿಟಿ ಶೋ ಇತಿಹಾಸದಲ್ಲೇ ಅತಿ ದೊಡ್ಡ ಯಶಸ್ಸು ಕಂಡಿದೆ ಎಂದು ಜೀ ಕನ್ನಡ ವಾಹಿನಿ ಹೇಳಿಕೊಂಡಿದೆ. ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಐದು ಜನ ಸೆಣೆಸಲಿದ್ದಾರೆ. ಉಡುಪಿಯ ಅಭಿಜಾತ್ ಭಟ್, ಇಟಗಿಯ ವಿಶ್ವಪ್ರಸಾದ್, ಬಳ್ಳಾರಿಯ ಜ್ಞಾನೇಶ್, ಬೆಂಗಳೂರಿನ ಕೀರ್ತನ, ಹಾಗೂ ಕ್ವಾರ್ಟರ್ ಫೈನಲ್ ಹಂತದಿಂದ ನೇರವಾಗಿ ಫಿನಾಲೆ ತಲುಪಿರುವ ಚನ್ನಗಿರಿಯ ತೇಜಸ್ ಶಾಸ್ತ್ರಿ ಅಂತಿಮ ಸುತ್ತಿನಲ್ಲಿ ಇದ್ದಾರೆ.