ನಗರದಲ್ಲಿ ಭಾನುವಾರ ಅಖಿಲ ಭಾರತ ಯುವ ಜನ ಫೆಡರೇಷನ್ (ಎಐವೈಎಫ್) ತಾಲ್ಲೂಕು ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿ, ಗೋಪೂಜೆ ಮಾಡುತ್ತೇವೆ ಎನ್ನುವವರು ಎರಡು ತಿಂಗಳಿಂದ ಚಳಿ, ಮಳೆಯನ್ನು ಲೆಕ್ಕಿಸದೆ ರಸ್ತೆಯಲ್ಲಿ ಕುಳಿತಿರುವ ರೈತರನ್ನು ಮಾತನಾಡಿಸಲು ಸಾಧ್ಯವಾಗಿಲ್ಲ. ರೈತರನ್ನು ಭಯೋತ್ಪಾದಕರು ಎನ್ನುತ್ತಾರೆ. ತಾನೇ ಹಾಕಿದ ರಸ್ತೆಗೆ ಮೊಳೆ ಹೊಡೆದು ತನ್ನ ರೈತರ ಪರವಾದ ಕಾಳಜಿಯನ್ನು ತೋರಿಸಿದೆ. ಇದೊಂದು ನಾಚಿಗೆಟ್ಟ ಸರ್ಕಾರ ಎಂದು ದೂರಿದರು.