ವಿದ್ವತ್ ಹೇಳಿಕೆ: ‘ಫೆ.17ರ ರಾತ್ರಿ ಫರ್ಜಿ ಕೆಫೆಗೆ ಊಟಕ್ಕೆ ಹೋದಾಗ ನನ್ನ ಕಾಲು ನಲಪಾಡ್ನ ಸ್ನೇಹಿತನಿಗೆ ತಾಕಿತು. ಆ ಕೂಡಲೇ ನಾನು ಕ್ಷಮೆ ಕೋರಿದೆ. ಆಗ ಒಬ್ಬಾತ, ‘ಏನೋ ಅಣ್ಣನ ಎದುರೇ ಕಾಲು ಚಾಚಿಕೊಂಡು ಕುಳಿತಿದ್ದೀಯಾ’ ಎನ್ನುತ್ತಾ ಗಲಾಟೆ ಪ್ರಾರಂಭಿಸಿದ. ಕಾಲಿನ ಮೂಳೆ ಮುರಿದಿರುವುದಾಗಿ ನಾನು ಹೇಳಿದಾಗ, ‘ಅಣ್ಣನ ಮುಂದೆಯೇ ಎದುರು ಮಾತನಾಡುತ್ತೀಯಾ’ ಎಂದು ಕೆನ್ನೆಗೆ ಹೊಡೆದ. ನಂತರ ನನ್ನ ಸ್ನೇಹಿತರು ರಕ್ಷಣೆಗೆ ಮುಂದಾದಾಗ, ಎಲ್ಲರೂ ಸೇರಿ ಹಲ್ಲೆ ಮಾಡಿದರು.’