ಈ ಸಂದರ್ಭದಲ್ಲಿ ನೀಲ್ ಜೋಸೆಫ್, ವಿಜಯನ್ ಮತ್ತಿತರರು ಅಭಿವೃದ್ಧಿ ನೆಪದಲ್ಲಿ ಶಾಲೆಗೆ ಬರತೊಡಗಿದರು. ಶಾಲೆಯಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದರು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಿಧನ ಹೊಂದಿದ ಮೇಲೆ ಹೊಸ ಕಾರ್ಯದರ್ಶಿಯನ್ನು ನೇಮಕ ಮಾಡುವಂತೆ ಬಿಜಿಎಂಎಲ್ ಆಡಳಿತಕ್ಕೆ ಮನವಿ ಮಾಡಲಾಗಿತ್ತು. ಆದರೆ, ನೀಲ್ ಜೋಸೆಫ್ ಎಂಬುವರು ನಾನೇ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂದು ಶಾಲೆ ಸಿಬ್ಬಂದಿಗೆ ನೋಟಿಸ್ ನೀಡಲು ಶುರು ಮಾಡಿದರು. ಶಾಲೆಯ ಎಲ್ಲಾ ವ್ಯವಹಾರದಲ್ಲೂ ಹಸ್ತಕ್ಷೇಪ ಮಾಡಲು ಶುರು ಮಾಡಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.