ರಮೇಶ್ ಅವರು ಚಿಲಪನಹಳ್ಳಿ ಶಾಲೆ ಆವರಣವನ್ನು ಸಂಪೂರ್ಣ ಹಸಿರಾಗಿಸಿದ್ದು, ಹೂವು ಮತ್ತು ತರಕಾರಿ ಜತೆಗೆ ಔಷಧದ ಗಿಡಗಳನ್ನು ಬೆಳೆಸಿದ್ದಾರೆ. ಅಲ್ಲದೇ, ಕುಂಡಗಳಲ್ಲಿ ಗಿಡ ಬೆಳೆಸಿ ಶಾಲೆಯನ್ನು ಹಸಿರುಮಯಗೊಳಿಸಿದ್ದಾರೆ. ಈ ಶಾಲೆಯು ಸತತ 6 ಬಾರಿ ಪರಿಸರ ಮಿತ್ರ ಶಾಲಾ ಪ್ರಶಸ್ತಿಗೆ ಭಾಜನವಾಗಿದೆ.ಶಾಲಾ ಮಕ್ಕಳು ಇವರ ಮುಂದಾಳತ್ವದಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆ ಹಾಗೂ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.