ಸ್ವಾವಲಂಬಿ ಬದುಕು: ‘ಕರ್ನಾಟಕ ಕಲ್ಯಾಣ ಗ್ರಾಮಗಳ ಅಭಿವೃದ್ಧಿಯ ಜತೆಗೆ ಸ್ವಾವಲಂಬಿ ಬದುಕು, ಪ್ರೀತಿಯ ವಾತಾವರಣ, ಶಾಂತಿ ಸೌಹಾರ್ದತೆ ಕಾಪಾಡುವುದು ಪಾದಯಾತ್ರೆಯ ಮುಖ್ಯ ಉದ್ದೇಶ. 2ನೇ ಹಂತದ ಪಾದಯಾತ್ರೆ ಅ.1ಕ್ಕೆ ಆರಂಭವಾಗುತ್ತದೆ. 3ನೇ ಹಂತದ ಪಾದಯಾತ್ರೆ ಕೂಡಲ ಸಂಗಮದವರೆಗೆ ನಡೆಯಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಾದಯಾತ್ರೆ ಸಂಚರಿಸಲಿದೆ. ಪಕ್ಷಾತೀತವಾಗಿ ರೈತರು, ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಬಹುದು’ ಎಂದು ಮಾಹಿತಿ ನೀಡಿದರು.