‘ನಾಲ್ಕು ವರ್ಷಗಳಿಂದ ಜನಪರವಾದ ಒಂದೂ ಕಾರ್ಯಕ್ರಮ ಮಾಡದ ಕಾರಣ ರಸ್ತೆ, ನೀರು ವಿಚಾರ ಎತ್ತುವುದು ಬೇಡ ಎನ್ನುತ್ತಿದ್ದಾರೆ. ನಿರುದ್ಯೋಗ, ಅಗತ್ಯ ವಸ್ತುಗಳ ದರ ಏರಿಕೆ ಜನರನ್ನು ಸುಡುತ್ತಿವೆ. ಕಾಂಗ್ರೆಸ್ನ ಐದು ವರ್ಷಗಳ ಅವಧಿಯಲ್ಲಿ ಅನ್ನಭಾಗ್ಯ, ಕೃಷಿ ಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿ 20 ಕಾರ್ಯಕ್ರಮ ಕೊಟ್ಟೆವು ಎಂಬುದನ್ನು ನಾನು ಹೇಳಬಲ್ಲೆ’ ಎಂದು ತಿರುಗೇಟು ನೀಡಿದರು.