ರಥ ಮುಂದೆ ಚಲಿಸುತ್ತಿದ್ದಂತೆ ಭಕ್ತರು ದೇವರಿಗೆ ಹಣ್ಣು ಕಾಯಿ ಅರ್ಪಿಸಿ ಕರ್ಪೂರ ಆರತಿ ಬೆಳಗಿ ಪೂಜೆ ಮಾಡಿದರು. ಯುವಕರ ಗುಂಪು ಈಡುಗಾಯಿ ಒಡೆದು ಪೂಜೆ ಸಲ್ಲಿಸಿತು. ದೇವರ ಸ್ಮರಣೆಯೊಂದಿಗೆ ಬಾಳೆ ಹಣ್ಣು, ಹೂವು, ದವನ, ಜೀರಿಗೆ, ಮೆಣಸು, ಉಪ್ಪು, ಹೂವು, ವಿಳ್ಯದೆಲೆ ರಥಕ್ಕೆ ಅರ್ಪಿಸುವ ಮೂಲಕ ಹರಕೆ ತೀರಿಸಿಕೊಂಡರು.