<p><strong>ಮುಳಬಾಗಿಲು:</strong> ಇತ್ತೀಚೆಗೆ ಕಸವಿರೆಡ್ಡಿ ಹಳ್ಳಿ ಗ್ರಾಮದಲ್ಲಿ ರಾಸಾಯನಿಕ ಮಿಶ್ರಿತ ನೀರು ಕುಡಿದು ಸಾವನ್ನಪ್ಪಿದ್ದ ಐದು ಹಸುಗಳಿಗೆ ಸೋಮವಾರ ನಗರದಲ್ಲಿ ಕೋಮುಲ್ ವತಿಯಿಂದ ಪರಿಹಾರ ಹಣದ ಚೆಕ್ ವಿತರಿಸಲಾಯಿತು.</p>.<p>ತಾಲ್ಲೂಕಿನ ಕಸವಿರೆಡ್ಡಿ ಹಳ್ಳಿ ಗ್ರಾಮದಲ್ಲಿ ರೈತರೊಬ್ಬರು ಕೃಷಿ ಚಟುವಟಿಕೆಗಳಿಗೆಂದು ರಾಸಾಯನಿಕ ಗೊಬ್ಬರ ಯೂರಿಯಾ ಮತ್ತಿತರರ ಔಷಧಗಳನ್ನು ಮಿಶ್ರಣ ಮಾಡಿ ಇಡಲಾಗಿತ್ತು. ಆ ನೀರನ್ನು ಗ್ರಾಮದ ಎಸ್.ನಂದಿನಿ, ಕೆ.ವೆಂಕಟೇಶ್, ಎನ್.ವೆಂಕಟೇಶ್ ಹಾಗೂ ಮುನಿಯಪ್ಪ ಎಂಬುವವರ ಹಸುಗಳು ಕುಡಿದು 10 ಹಸುಗಳುಗಳು ಅನಾರೋಗ್ಯಕ್ಕೆ ಒಳಗಾಗಿದ್ದವು. ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಐದು ಹಸುಗಳು ಸಾವನ್ನಪ್ಪಿದ್ದರಿಂದ ಕೋಮುಲ್ ವತಿಯಿಂದ ಪರಿಹಾರದ ಚೆಕ್ ವಿತರಿಸಲಾಯಿತು. </p>.<p>ಈ ವೇಳೆ ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ಮಾತನಾಡಿ, ರೈತರು ತಮ್ಮ ಎಲ್ಲಾ ಹಸುಗಳಿಗೆ ವಿಮೆ ಮಾಡಿಸಿಕೊಂಡರೆ ಹಸುಗಳು ಆಕಸ್ಮಿಕವಾಗಿ ಸಾವನ್ನಪ್ಪಿದರೆ ಕೋಮುಲ್ ವತಿಯಿಂದ ₹70 ಸಾವಿರ ಪರಿಹಾರ ನೀಡಲಾಗುತ್ತದೆ. ಆದರೆ, ಇತ್ತೀಚಿಗೆ ಸಾವನ್ನಪ್ಪಿದ ಐದು ಹಸುಗಳಿಗೆ ವಿಮೆ ಇಲ್ಲದ ಕಾರಣ ಕೋಮುಲ್ ದತ್ತಿ ನಿಧಿಯಿಂದ ತಲಾ ₹10 ಸಾವಿರ ಪರಿಹಾರ ನೀಡಲಾಯಿತು. ರೈತರು ತಪ್ಪದೇ ಹಸುಗಳಿಗೆ ವಿಮೆ ಮಾಡಿಸಿ ಎಂದರು.</p>.<p>ಕೋಮುಲ್ ನಿರ್ದೇಶಕ ಬಿ.ವಿ.ಸಾಮೇಗೌಡ, ವಕೀಲ ಎಂ.ಎಸ್.ಶ್ರೀನಿವಾಸ ರೆಡ್ಡಿ, ಕಸವಿರೆಡ್ಡಿ ಹಳ್ಳಿ ರಾಜು, ಪೊಂಬರಹಳ್ಳಿ ಡೇರಿ ಅಧ್ಯಕ್ಷ ಮಂಜುನಾಥ್, ವಾನಿಗಾನಹಳ್ಳಿ ಡೇರಿ ಅಧ್ಯಕ್ಷ ಎ.ಸಿ.ಕೃಷ್ಣಪ್ಪ, ವ್ಯವಸ್ಥಾಪಕ ಡಾ.ಕಿರಣ್ ಕುಮಾರ್, ಮಧು ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು:</strong> ಇತ್ತೀಚೆಗೆ ಕಸವಿರೆಡ್ಡಿ ಹಳ್ಳಿ ಗ್ರಾಮದಲ್ಲಿ ರಾಸಾಯನಿಕ ಮಿಶ್ರಿತ ನೀರು ಕುಡಿದು ಸಾವನ್ನಪ್ಪಿದ್ದ ಐದು ಹಸುಗಳಿಗೆ ಸೋಮವಾರ ನಗರದಲ್ಲಿ ಕೋಮುಲ್ ವತಿಯಿಂದ ಪರಿಹಾರ ಹಣದ ಚೆಕ್ ವಿತರಿಸಲಾಯಿತು.</p>.<p>ತಾಲ್ಲೂಕಿನ ಕಸವಿರೆಡ್ಡಿ ಹಳ್ಳಿ ಗ್ರಾಮದಲ್ಲಿ ರೈತರೊಬ್ಬರು ಕೃಷಿ ಚಟುವಟಿಕೆಗಳಿಗೆಂದು ರಾಸಾಯನಿಕ ಗೊಬ್ಬರ ಯೂರಿಯಾ ಮತ್ತಿತರರ ಔಷಧಗಳನ್ನು ಮಿಶ್ರಣ ಮಾಡಿ ಇಡಲಾಗಿತ್ತು. ಆ ನೀರನ್ನು ಗ್ರಾಮದ ಎಸ್.ನಂದಿನಿ, ಕೆ.ವೆಂಕಟೇಶ್, ಎನ್.ವೆಂಕಟೇಶ್ ಹಾಗೂ ಮುನಿಯಪ್ಪ ಎಂಬುವವರ ಹಸುಗಳು ಕುಡಿದು 10 ಹಸುಗಳುಗಳು ಅನಾರೋಗ್ಯಕ್ಕೆ ಒಳಗಾಗಿದ್ದವು. ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಐದು ಹಸುಗಳು ಸಾವನ್ನಪ್ಪಿದ್ದರಿಂದ ಕೋಮುಲ್ ವತಿಯಿಂದ ಪರಿಹಾರದ ಚೆಕ್ ವಿತರಿಸಲಾಯಿತು. </p>.<p>ಈ ವೇಳೆ ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ಮಾತನಾಡಿ, ರೈತರು ತಮ್ಮ ಎಲ್ಲಾ ಹಸುಗಳಿಗೆ ವಿಮೆ ಮಾಡಿಸಿಕೊಂಡರೆ ಹಸುಗಳು ಆಕಸ್ಮಿಕವಾಗಿ ಸಾವನ್ನಪ್ಪಿದರೆ ಕೋಮುಲ್ ವತಿಯಿಂದ ₹70 ಸಾವಿರ ಪರಿಹಾರ ನೀಡಲಾಗುತ್ತದೆ. ಆದರೆ, ಇತ್ತೀಚಿಗೆ ಸಾವನ್ನಪ್ಪಿದ ಐದು ಹಸುಗಳಿಗೆ ವಿಮೆ ಇಲ್ಲದ ಕಾರಣ ಕೋಮುಲ್ ದತ್ತಿ ನಿಧಿಯಿಂದ ತಲಾ ₹10 ಸಾವಿರ ಪರಿಹಾರ ನೀಡಲಾಯಿತು. ರೈತರು ತಪ್ಪದೇ ಹಸುಗಳಿಗೆ ವಿಮೆ ಮಾಡಿಸಿ ಎಂದರು.</p>.<p>ಕೋಮುಲ್ ನಿರ್ದೇಶಕ ಬಿ.ವಿ.ಸಾಮೇಗೌಡ, ವಕೀಲ ಎಂ.ಎಸ್.ಶ್ರೀನಿವಾಸ ರೆಡ್ಡಿ, ಕಸವಿರೆಡ್ಡಿ ಹಳ್ಳಿ ರಾಜು, ಪೊಂಬರಹಳ್ಳಿ ಡೇರಿ ಅಧ್ಯಕ್ಷ ಮಂಜುನಾಥ್, ವಾನಿಗಾನಹಳ್ಳಿ ಡೇರಿ ಅಧ್ಯಕ್ಷ ಎ.ಸಿ.ಕೃಷ್ಣಪ್ಪ, ವ್ಯವಸ್ಥಾಪಕ ಡಾ.ಕಿರಣ್ ಕುಮಾರ್, ಮಧು ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>