‘ವಾಲೀಕಾರ ಅವರು ದಲಿತರ ಹಾಗೂ ಶೋಷಿತರ ಪರವಾದ ಕಲ್ಯಾಣ ನಾಡಿನ ಪ್ರಮುಖ ಸಾಹಿತಿಯಾಗಿ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಮಹಾಕಾವ್ಯ, ಕವನ ಸಂಕಲನ, ಕಥಾ ಸಂಕಲನ, ರಂಗಭೂಮಿ, ಜನಪದ, ಪ್ರಬಂಧ, ನಾಟಕ, ನಟನೆ, ನಿರ್ದೇಶನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ದುಡಿದ ವಾಲೀಕಾರರು ಬಹುಮುಖಿ ಪ್ರತಿಭೆ’ ಎಂದು ಬಣ್ಣಿಸಿದರು.