ಈಗಾಗಲೇ ಗ್ರಾಮದ ಬಳಿಯ ಅಂಚೆಮುಸ್ಕೂರು, ಸಂಪಂಗೆರೆ ಗ್ರಾಮದಲ್ಲಿ ಕೋವಿಡ್–19 ದೃಢಪಟ್ಟಿದೆ. ಇದರಿಂದ ಈ ಭಾಗದ ಜನರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜತೆಗೆ ದೇವಾಲಯದ ಆವರಣದಲ್ಲಿ ಕೇಶಮುಂಡನೆ ನಿಷೇಧಿಸಿದ್ದರೂ, ಗ್ರಾಮದ ಸುತ್ತಮುತ್ತಲಿನ ಬೇರೆ ಸ್ಥಳಗಳಲ್ಲಿ ಹರಿಕೆ ಹೊತ್ತ ಮಕ್ಕಳಿಗೆ ಕೇಶಮುಂಡನ ಮಾಡುತ್ತಿದ್ದಾರೆ. ಇದರಿಂದ ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚಾಗಿದ್ದು, ತಾತ್ಕಾಲಿಕವಾಗಿ ದರ್ಶನ ನಿಲ್ಲಿಸಬೇಕು ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.