ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ತಡೆಯಾಜ್ಞೆ ತೆಗೆದುಕೊಂಡು ಬಂದು ಹಲವು ಮಂತ್ರಿಗಳು ಇದ್ದಾರೆ. ಇವರಲ್ಲದೇ, ಕೇಂದ್ರದ ಮಾಜಿ ಸಚಿವರು ಒಬ್ಬರಿದ್ದಾರೆ. ಗೋಪಾಲಯ್ಯ ಮಾತ್ರ ತಡೆಯಾಜ್ಞೆ ತರಲಿಲ್ಲ. ಅಂಥವರ ಪಕ್ಕದಲ್ಲಿ ಕುಳಿತಿರುವ ಬಸವರಾಜ ಬೊಮ್ಮಾಯಿ, ನೀನು ಎಲ್ಲಿ ಹೋಗಿ ಸಿಲುಕಿಕೊಂಡಿದ್ದಿಯಪ್ಪ? ಇವರಿಗೆ ನಾಚಿಕೆ ಇದೆಯೇ? ಆರ್ಎಸ್ಎಸ್ನಲ್ಲಿ ಕೆಲವರು ಪ್ರಾಮಾಣಿಕರು ಇದ್ದಾರೆ. ಅವರಿಗೆ ಇದು ಒಪ್ಪಿಗೆಯೋ’ ಎಂದು ಪ್ರಶ್ನಿಸಿದರು.