ಅಪ್ಪಯ್ಯನಅಗ್ರಹಾರ ಗ್ರಾಮದಲ್ಲಿ ಜಲಗಾರರಾಗಿ ಸೇವೆ ಸಲ್ಲಿಸುತ್ತಿದ್ದ ವೆಂಕಟಗಿರಿಯಪ್ಪ ಅನ್ಯ ಕಾರ್ಯದ ನಿಮಿತ್ತ ದ್ವಿಚಕ್ರವಾಹನದಲ್ಲಿ ಪತ್ನಿಯೊಂದಿಗೆ ಮಾಸ್ತಿ-ತಮಿಳುನಾಡಿನ ಬೇರಿಕಿ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರ ಪತ್ನಿ ಮೃತಪಟ್ಟಿದ್ದಾರೆ.