ಮಾಲೂರು: ಕೊರೊನಾ ಸೋಂಕು ಏರಿಕೆಯ ಭೀತಿ ನಡುವೆಯೇ ಸಂಕ್ರಾಂತಿ ಹಬ್ಬದ ಆಚರಣೆಗೆ ಪಟ್ಟಣದಲ್ಲಿ ಸಿದ್ಧತೆ ನಡೆದಿದೆ.
ಎಳ್ಳು-ಬೆಲ್ಲ ಬೀರಲು ಯುವತಿಯರು, ಮಹಿಳೆಯರು ಹಾಗೂ ಮಕ್ಕಳು ಸಾಮಗ್ರಿ ಹಾಗೂ ಹೊಸ ಉಡುಪುಗಳ ಖರೀದಿಯಲ್ಲಿ ನಿರತರಾಗಿದ್ದರು. ಗ್ರಾಮಾಂತರ ಪ್ರದೇಶದಲ್ಲಿ ದನಗಳಿಗೆ ಕಿಚ್ಚು ಹಾಯಿಸಲು ಸಿದ್ಧತೆ ನಡೆದಿದೆ.
ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಇದು ಸುಗ್ಗಿ ಸಂಭ್ರಮದ ಸಂಕೇತ. ಸೂರ್ಯನು ಕರ್ಕರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವೇ ಮಕರ ಸಂಕ್ರಾಂತಿ.
ಪಟ್ಟಣದ ಮಹಾರಾಜ ವೃತ್ತ, ಮಾರಿಕಾಂಬ ವೃತ್ತ, ಬಸ್ನಿಲ್ದಾಣದ ರಸ್ತೆಬದಿಯಲ್ಲಿ ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಕಡಲೆಕಾಯಿ ಬೀಜ, ಉರಿಗಡಲೆ ಮಾರಾಟ ಬಲು ಜೋರಾಗಿತ್ತು. ಬೆಲೆ ಹೆಚ್ಚಾಗಿದ್ದರೂ ಜನರು ಮಾತ್ರ ಅಂಗಡಿಗಳಿಗೆ ಮುಗಿಬಿದ್ದು ಖರೀದಿಸುತ್ತಿರುವುದು ಕಂಡು ಬಂದಿತು.
ಇನ್ನು ದನ, ಕರುಗಳಿಗೆ ಅಲಂಕಾರ ಮಾಡುವ ಕೊಂಬಿನ ಬಣ್ಣ, ಬಣ್ಣದ ಪೇಪರ್ಗಳು, ಕೊರಳಿನ ಹಾಗೂ ಕಾಲಿನ ಗೆಜ್ಜೆ, ಬಟ್ಟೆ ಮಾರಾಟ ಜೋರಾಗಿತ್ತು.