ದೂರು ದಾಖಲು: ‘ಅಗರ ಸಮೀಪದ ಸರ್ವೆ ನಂಬರ್ 167ರ ಜಮೀನು ಅಬ್ದುಲ್ ರೆಹಮಾನ್ ಎಂಬುವರಿಗೆ ಸೇರಿದೆ. ಆದರೆ, ಆ ಜಮೀನಿಗೆ ಎ.ಎನ್.ಪ್ರಕಾಶ್ ಮತ್ತು ಅಹಮ್ಮದ್ ಉಲ್ಲಾ ಎಂಬುವರು ಅಕ್ರಮವಾಗಿ ಕಾಂಪೌಂಡ್ ಹಾಕಿ ಕ್ರಷರ್ ಆರಂಭಿಸಲು ನಿರಾಕ್ಷೇಪಣಾ ಪತ್ರ ಪಡೆದಿದ್ದಾರೆ. ಈ ಸಂಬಂಧ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಆದ ಕಾರಣ ಎನ್ಒಸಿ ರದ್ದುಪಡಿಸಬೇಕು’ ಎಂದು ಮನವಿ ಮಾಡಿದರು.