ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಿಲ್ಪಿ ಸೋಮಾಚಾರಿ, ‘ಸಾಂಪ್ರದಾಯಿಕ ಶಿಲ್ಪಕಲಾ ಕ್ಷೇತ್ರವನ್ನು ವೃತ್ತಿ ಪ್ರವೃತ್ತಿಯಾಗಿ ಆಯ್ಕೆ ಮಾಡಿಕೊಂಡು ಮುಂದುವರಿಯುವವರು ಅಪರೂಪ. ಆದರೆ, ಇದೇ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡು ಶಿಲ್ಪಗಳನ್ನು ರಚಿಸುತ್ತಾ ಶಿಲ್ಪಿಗಳು ಸಾಗುತ್ತಿದ್ದಾರೆ. ಇಂತಹ ಕಲಾವಿದರನ್ನು ಗುರುತಿಸುವುದು ಸಮಾಜದ ಜವಾಬ್ದಾರಿ’ ಎಂದು ಹೇಳಿದರು.