ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1.52 ಕೋಟಿ ಸಾಲ ವಿತರಣೆ: ವೆಂಕಟೇಶ್

ಸಕಾಲಕ್ಕೆ ಮರು ಪಾವತಿಸಲು ರೈತರಿಗೆ ಸಲಹೆ
Last Updated 25 ಜನವರಿ 2022, 3:41 IST
ಅಕ್ಷರ ಗಾತ್ರ

ಕೋಲಾರ: ‘ರೈತರು ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಂಡು ನಿಗದಿತ ಅವಧಿಯಲ್ಲಿ ಮರುಪಾವತಿಸಿದರೆ ಬೇರೆಯವರಿಗೆ ಸಾಲ ನೀಡಲು ಸಹಕಾರಿಯಾಗಲಿದೆ’ ಎಂದು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ವೆಂಕಟೇಶ್ ಕಿವಿಮಾತು ಹೇಳಿದರು.

ನಗರದ ಪಿಎಲ್‍ಡಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ರೇಷ್ಮೆ, ಕೋಳಿ, ಕುರಿ ಉದ್ಯಮ, ಟ್ರಾಕ್ಟರ್‌ ಸೇರಿದಂತೆ ವಿವಿಧ ಯೋಜನೆಯಡಿ 32 ಮಂದಿ ₹ 1.52ಕೋಟಿ ಸಾಲ ಅವರು ಮಾತನಾಡಿದರು.

ಸಾಲವನ್ನು ಶೇ 3ರ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ. ಇಷ್ಟು ಕಡಿಮೆ ಬಡ್ಡಿ ದರದಲ್ಲಿ ಬೇರೆ ಯಾರೂ ಸಾಲ ನೀಡುವುದಿಲ್ಲ. ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಪಾವತಿಸಿದರೆ ಉಳಿದ ಶೇ 9ರಷ್ಟು ಬಡ್ಡಿಯನ್ನು ಸರ್ಕಾರ ಪಾವತಿಸುತ್ತದೆ. ತಪ್ಪಿದರೆ ಬಾಕಿದಾರರೇ ಶೇ 12ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.

ಸಾಲದ ಕಂತು ಬಾಕಿ ಇರಿಸಿಕೊಂಡು ಬ್ಯಾಂಕಿನವರು ವಸೂಲಾತಿಗಾಗಿ ಮನೆ ಬಾಗಿಲಿಗೆ ಬರುವಂತೆ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಬ್ಯಾಂಕಿನಿಂದ ಸಾಲದ ಮೊತ್ತವನ್ನು ₹ 4ರಿಂದ ₹ 5 ಕೋಟಿಗೆ ವಿಸ್ತರಿಸಲಾಗುವುದು. ಇದಕ್ಕೆ ಪೂರಕವಾಗುವಂತೆ ಸಾಲ ಪಡೆದವರು ಕಂತುಗಳನ್ನು ಸಮರ್ಪಕವಾಗಿ ಪಾವತಿಸಬೇಕು ಎಂದು ಕೋರಿದರು.

ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಬ್ಯಾಂಕಿನಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿ ಸಾಲಗಳಿದ್ದು, ಸಾಲದ ಭದ್ರತೆಗೆ ಪಡೆದ ಜಮೀನಿನ ದಾಖಲೆಗಳನ್ನು ನಾವು ರಾಜ್ಯಮಟ್ಟದ ಬ್ಯಾಂಕಿಗೆ ನೀಡುತ್ತೇವೆ. ರಾಜ್ಯ ಬ್ಯಾಂಕಿಗೆನಬಾರ್ಡ್ ಸಾಲ ಮಂಜೂರು ಮಾಡುತ್ತದೆ ಎಂದು ವಿವರಿಸಿದರು.

ರೈತರು ಖಾಸಗಿ ಮೀಟರ್ ಬಡ್ಡಿ ದಂಧೆಕೋರರತ್ತ ಯಾವುದೇ ಕಾರಣಕ್ಕೂ ಹೋಗಬೇಡಿ. ನಿಮಗೆ ಬ್ಯಾಂಕಿನಿಂದ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡಲಿದೆ. ಇದನ್ನು ಸದ್ಬಳಕೆ ಮಾಡಿಕೊಂಡರೆ ನೀವು ಅಭಿವೃದ್ಧಿ ಹೊಂದುವ ಜೊತೆಗೆ ಬ್ಯಾಂಕ್ ಸಹ ತನ್ನ ವಹಿವಾಟು ವಿಸ್ತರಿಸಿ ಅಭಿವೃದ್ಧಿಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಬಿ.ಎಸ್. ಶೋಭಾ, ನಿರ್ದೇಶಕರಾದ ಎಚ್. ಕೃಷೇಗೌಡ, ಶಶಿಧರ್, ಟಿ.ಕೆ. ಬೈರೇಗೌಡ, ಎ. ಶಿವಕುಮಾರ್, ಕೆ.ಸಿ. ಮಂಜುನಾಥ್, ಎಂ. ಮಂಜುನಾಥ್, ಜೆ.ಎಂ. ರಾಧಕೃಷ್ಣ, ಕೆ.ಎಂ. ಗೋವಿಂದಪ್ಪ, ಬಿ. ಅಮರೇಶ್, ಸುನಂದಮ್ಮ, ಪಾಪಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT