ಕೆಲ ಯೋಜನೆ ಪುನರ್ ಪ್ರಸ್ತಾಪ
ಕೋಲಾರದ ತೇರಹಳ್ಳಿ ಬೆಟ್ಟದ ಶಿವಗಂಗೆಯಲ್ಲಿರುವ ‘ಆದಿಮ ಸಾಂಸ್ಕೃತಿಕ ಕೇಂದ್ರ’ಕ್ಕೆ ಅನುದಾನ ನೀಡುವ ಮೂಲಕ ವಿವಿಧ ಸಾಂಸ್ಕೃತಿಕ ಚಟುವಟಿಕೆ ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ. ಆದರೆ ಎಷ್ಟು ಅನುದಾನ ಎಂಬುದನ್ನು ಹೇಳಿಲ್ಲ. ಅಲ್ಲದೇ ಕಳೆದ ಬಜೆಟ್ನಲ್ಲೂ ಈ ವಿಚಾರ ಪ್ರಸ್ತಾಪವಾಗಿತ್ತು. ಕೋಲಾರದ ಅಮಾನಿಕೆರೆಗೆ (ಕೋಲಾರಮ್ಮ ಕೆರೆ) ಕಾಲುವೆ ತಡೆಗೋಡೆ ಮತ್ತು ಗೇಟ್ ನಿರ್ಮಾಣ ಸಂಬಂಧಪಟ್ಟಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ ಮಾಡಲಾಗಿತ್ತು. ಅದೇ ವಿಚಾರವನ್ನು ಈಗ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ಬಂಗಾರಪೇಟೆ ಮಾಲೂರು ತಾಲ್ಲೂಕಿಗೆ ಶ್ರಮಿಕ ವಸತಿ ಶಾಲೆ ನಿರ್ಮಾಣವೂ ಈ ಹಿಂದೆ ಘೋಷಣೆ ಆಗಿತ್ತು.