ಗಣಕೀಕೃತ ಪಹಣಿ ಮಾಡುವಾಗ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡುವುದಿಲ್ಲ. ಮನಬಂದಂತೆ ವಿಸ್ತೀರ್ಣ ನಮೂದಿಸುತ್ತಾರೆ. ಸ್ಥಳದ ತನಿಖೆ ಮಾಡಿದಾಗ ಪಹಣಿಯಲ್ಲಿರುವ ವಿಸ್ತೀರ್ಣ ಸ್ಥಳದಲ್ಲಿ ಇರುವುದಿಲ್ಲ. ತಾಲ್ಲೂಕಿನಾದ್ಯಂತ ಈ ಸಮಸ್ಯೆ ಇದೆ. ದೊಡ್ಡ ರೈತರು ಒಂದೇ ಕುಟುಂಬದಲ್ಲಿ ತನ್ನ ಹೆಸರಿಗೆ, ಹೆಂಡತಿ, ಅಣ್ಣ-ತಮ್ಮ, ಮಕ್ಕಳು ಮತ್ತು ಸಂಬಂಧಿಕರ ಹೆಸರಿನಲ್ಲಿ ಬೇರೆ ಬೇರೆ ಗ್ರಾಮಗಳಲ್ಲಿ ಅರ್ಜಿ ಹಾಕುವುದು ವಾಡಿಕೆಯಾಗಿದೆ ಎಂದು ದೂರಿದರು.