ಈ ದೂರು ಆಧರಿಸಿ ಕಂದಾಯ ಇಲಾಖೆ ಅಧಿಕಾರಿಗಳು ವೇಮಗಲ್ ಹೋಬಳಿ ಉಪ ತಹಶೀಲ್ದಾರ್ ಹೇಮಲತಾ ಅವರ ನೇತೃತ್ವದಲ್ಲಿ ಅಕ್ರಮ ನೀರಿನ ಸಂಪರ್ಕ ಕಡಿತಗೊಳಿಸಲು ಮಧ್ಯಾಹ್ನ ಸೀತಿಹೊಸೂರು ಬಳಿಗೆ ಹೋಗಿದ್ದರು. ಈ ವಿಷಯ ತಿಳಿದ ಸೀತಿಹೊಸೂರು, ಜಂಜಿಮಲ್ಲೆ, ಸೀತಿ, ಹೊಲೇರಹಳ್ಳಿ, ಮದ್ದೇರಿ ಮತ್ತು ತಿಪ್ಪೇನಹಳ್ಳಿಯ ರೈತರು ಅಧಿಕಾರಿಗಳಿಗೆ ಘೇರಾವ್ ಹಾಕಿದರು.