ರಾಜ್ಯ ಸಂಚಾಲಕ ಮುತ್ತುರಾಜ್ ಮಾತನಾಡಿ, ‘ಈ ಆಂದೋಲನ ಯಾವುದೇ ಒಂದು ಪಕ್ಷದ ವಿರುದ್ಧ ಅಲ್ಲ. ಕೇಂದ್ರ ಸರ್ಕಾರ ಹೆಚ್ಚಿನ ತೆರಿಗೆ ಪಡೆಯುತ್ತಿರುವುದರಿಂದ ಉದ್ಯೋಗ ಸೃಷ್ಟಿಯ ಹೆಚ್ಚಿನ ಹೊಣೆಗಾರಿಕೆ ಅದರ ಮೇಲಿದೆ. ದೇಶದ ಯುವಜನರ ಮುಖ್ಯವಾದ ಸಮಸ್ಯೆ ನಿರುದ್ಯೋಗ. ಆದರೆ, ಕೋಮುವಾದ, ರಾಜ–ರಾಣಿಯರ ಕಥೆಗಳು ಮುನ್ನೆಲೆಗೆ ಬಂದು ನೈಜ ಸಮಸ್ಯೆಗಳು ಬದಿಗೆ ಸರಿಯುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.