ಇಲ್ಲಿ ಶನಿವಾರ ನಡೆದ ಬ್ಯಾಂಕ್ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ರಾಜಕೀಯ ದುರುದ್ದೇಶಕ್ಕೆ ಬ್ಯಾಂಕ್ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರ ಪ್ರಯತ್ನಗಳು ಸಫಲವಾಗದು.ಬ್ಯಾಂಕನ್ನು ನಂಬಿರುವ ರೈತರು, ಮಹಿಳೆಯರ ಸೇವೆಯನ್ನು ಬದ್ಧತೆಯಿಂದ ಮಾಡಿ. ಅವರ ಪ್ರೀತಿ, ಆಶೀರ್ವಾದವೇ ನಮಗೆ ಶ್ರೀರಕ್ಷೆ. ರೈತರು ಮತ್ತು ಮಹಿಳಾ ಶಕ್ತಿಯ ಮುಂದೆ ವಿರೋಧಿಗಳ ಷಡ್ಯಂತ್ರ ವಿಫಲವಾಗುತ್ತದೆ’ ಎಂದು ತಿಳಿಸಿದರು.