ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸರ್ಕಾರಕ್ಕೆ ತಿಳಿವಳಿಕೆ ಕೊರತೆಯಿದೆ. ಸೋಂಕಿತರ ಅಂತ್ಯಕ್ರಿಯೆ ವಿಚಾರದಲ್ಲಿ ಬೇಜವಾಬ್ದಾರಿ ತೋರುತ್ತಿದೆ. ಈ ಬೇಜವಾಬ್ದಾರಿ ನಡೆಯಿಂದ ಜನರಲ್ಲಿ ಜಾಗೃತಿ ಬದಲಿಗೆ ಹೆದರಿಕೆ ಬಂದಿದೆ. ಕೊರೊನಾ ವಾರಿಯರ್ಸ್ ಸಹ ಆತಂಕಗೊಂಡಿದ್ದಾರೆ. ಬಂಧು ಬಳಗ, ರಕ್ತ ಸಂಬಂಧ, ಮಾನವೀಯತೆ ಸತ್ತು ಹೋಗಿದೆ’ ಎಂದು ಮಾರ್ಮಿಕವಾಗಿ ನುಡಿದರು.