ಕೆಜಿಎಫ್: ಬಿಜಿಎಂಎಲ್ ವರ್ಕ್ಶಾಪ್ನಲ್ಲಿ ಕರ್ತವ್ಯ ನಿರತರಾಗಿದ್ದ ಭದ್ರತಾ ಸಿಬ್ಬಂದಿ ಕದರಿವೇಲ್ (42) ಮಂಗಳವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸಿ.ಆರ್.ವರ್ಕ್ಶಾಪ್ನಲ್ಲಿ ರಾತ್ರಿ ಪಾಳಿ ಕೆಲಸಕ್ಕೆ ಹೋಗಿದ್ದ ವೇಳೆ ಅವರಿಗೆ ಹೃದಯಾಘಾತವಾಗಿರುವ ಸಾಧ್ಯತೆ ಇದೆ. ಮುಂಜಾನೆ ಅವರ ಸಾವಿನ ಬಗ್ಗೆ ತಿಳಿಯಿತು. ಕೂಡಲೇ ಬಿಜಿಎಂಎಲ್ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.
ಮೃತರಿಗೆ ಇಬ್ಬರು ಪುತ್ರಿಯರಿದ್ದು, ಪರಿಹಾರ ನೀಡುವಂತೆ ಕುಟುಂಬದವರು ಭದ್ರತಾ ಸಿಬ್ಬಂದಿಯನ್ನು ಕೋರಿದರು. ಮೃತನ ಪತ್ನಿ ವಿಮಲಾದೇವಿ ನೀಡಿದ ದೂರಿನ ಮೇರೆಗೆ ಚಾಂಪಿಯನ್ ರೀಫ್ಸ್ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.