ರಾತ್ರಿ ಸುರಿದ ಭಾರಿ ಮಳೆಗೆ ಕೋಲಾರದಿಂದ ಅರಹಳ್ಳಿಗೆ ತೆರಳುವ ರಸ್ತೆಯಲ್ಲಿ ಸಂಪೂರ್ಣ ನೀರು ತುಂಬಿದಿದೆ. ಅರಹಳ್ಳಿ ಕೆರೆ ಭರ್ತಿಯಾಗಿ ಕೋಡಿಯಲ್ಲಿ ನೀರು ರಭಸದಿಂದ ಹರಿಯುತ್ತಿದ್ದು, ಸುತ್ತಲಿನ ಜಮೀನುಗಳು ಮುಳುಗಿವೆ. ರಾಗಿ ಬಿತ್ತನೆ ಮಾಡಿದ್ದು, ನೀರಿನಲ್ಲಿ ತೊಳೆದು ಹೋಗಿದೆ. ಅವರೆ, ತೊಗರಿ ನಾಶವಾಗಿದೆ. ಕ್ಯಾಪ್ಸಿಕಂ, ಟೊಮೆಟೊ ಬೆಳೆಗೂ ಹಾನಿ ಉಂಟಾಗಿದೆ.
ಆಜಾದ್ ನಗರದ ಸರ್ಕಾರಿ ಪ್ರಾಥಮಿಕ ಉರ್ದು ಶಾಲೆ ಜಲಾವೃತಗೊಂಡಿದ್ದು, ರಜೆ ಘೋಷಿಸಲಾಗಿದೆ. ಈ ಭಾಗದ ಮನೆಗಳಿಗೂ ನೀರು ನುಗ್ಗಿದೆ.