ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ 8 ವರ್ಷಗಳಿಂದ ಸತತ ಹೋರಾಟ ಮಾಡುತ್ತಾ ದಲಿತರು, ಹಿಂದುಳಿದವರು ಹಾಗೂ ಹಾಗೂ ಶೋಷಿತರ ಧ್ವನಿಯಾಗಿದ್ದೇನೆ. ಸಂಘಟನೆ ಮೂಲಕ ಈವರೆಗೆ 72 ಹೋರಾಟ ನಡೆಸಲಾಗಿದೆ ಮತ್ತು 39 ಅಂತರ್ಜಾತಿ ವಿವಾಹ ಮಾಡಿಸಿದ್ದೇನೆ. ಈ ಜನಪರ ಕಾರ್ಯಗಳೇ ನನಗೆ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿವೆ’ ಎಂದು ಹೇಳಿದರು.