ಹೆಸರು ಗಿರೀಶ್, 10ನೇ ಕ್ಲಾಸ್ ಓದಿದ್ದೀನಿ. ಊರು ಮಂಡ್ಯ ಜಿಲ್ಲೆಯ ವಡೇರಹಳ್ಳಿ. ಅಪ್ಪ ಅಮ್ಮ ಮನೆಗೆಲಸ ಮಾಡಿ ನನ್ನ ಓದಿಸಿದ್ರು ನಾನು ಫೇಲಾದೆ. ಆಮೇಲೆ ಲಾರಿಗೆ ಮರಳು ತುಂಬುವ ಕೆಲಸಕ್ಕೆ ಸೇರಿಕೊಂಡೆ. ಪ್ರತಿನಿತ್ಯ ಮರಳು ಹೊತ್ತು ಸಾಕಾಯಿತು. ನನಗೂ ಮದುವೆ ಆಯಿತು ಸಂಸಾರ ನಿಭಾಯಿಸಬೇಕು, ನನ್ನ ನಂಬಿ ಬಂದವಳನ್ನು ಸಾಕಬೇಕೆಂದು ಬೆಂಗಳೂರಿಗೆ ಬಂದು ಗಾಯತ್ರಿ ನಗರದಲ್ಲಿ ಬಾಡಿಗೆ ಮನೆ ಮಾಡಿದೆ.