ಹಾಲಿನ ಮಹತ್ವ ಮತ್ತು ಜೈವಿಕ ಗುಣಮಟ್ಟ ಕುರಿತು ಮಾತನಾಡಿದ ಕೋಚಿಮುಲ್ ಶಿಬಿರ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ‘ಉತ್ಪಾದಕರು ಸಂಘಕ್ಕೆ ಗುಣಮಟ್ಟದ ಹಾಲು ನೀಡುವುದರಿಂದ ಸಂಘದ ಮತ್ತು ಉತ್ಪಾದಕರ ಸರ್ವತ್ತೋಮುಖ ಅಭಿವೃದ್ಧಿಯಾಗುತ್ತದೆ. ರಾಸುಗಳಿಗೆ ಪ್ರತಿ ವರ್ಷ ಗುಂಪು ವಿಮೆ, ಕಾಲುಬಾಯಿ ಲಸಿಕೆ, ಕೋಚಿಮುಲ್ ವಿಮೆ ಮಾಡಿಸಬೇಕು’ ಎಂದು ಹೇಳಿದರು.