ಕಾಂಗ್ರೆಸ್ ನಾಯಕರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಸಚಿವ ಎಚ್.ನಾಗೇಶ್, ‘ಇಡೀ ದೇಶದಲ್ಲಿ ಐಟಿ ದಾಳಿ ನಡೆಯುತ್ತಿದೆ. ಇಲಾಖೆ ಇರೋದೇ ಅದಕ್ಕೆ, ಅವರ ಕರ್ತವ್ಯ ಮಾಡಬೇಕಲ್ಲವೇ, ಯಾಕೆ ಏನು ಎಂದು ಹೇಳಲು ಸಾಧ್ಯವಿಲ್ಲ. ಒಂದು ಪಕ್ಷ ಇನ್ನೊಂದು ಪಕ್ಷದ ವಿರುದ್ದ ಅರೋಪ ಮಾಡುವುದು ಸಹಜವಾದ್ದರಿಂದ ಕಾಂಗ್ರೆಸ್ ಅರೋಪವೂ ಸಹಜವೇ’ ಎಂದು ಪ್ರತಿಕ್ರಿಯಿಸಿದರು.