ಗ್ರಾಮಸ್ಥರ ಕೋರಿಕೆಯ ಮೇರೆಗೆ ಕೋಲಾರ-ಚಿಕ್ಕಬಳ್ಳಾಪುರ ದೇವಾಲಯ ಮತ್ತು ಶಿಲಾಶಾಸನಗಳ ತಜ್ಞರಾದ ಪ್ರೊ. ಕೆ.ಆರ್.ನರಸಿಂಹನ್ ಮತ್ತು ಡಾ.ಅರಿವು ಶಿವಪ್ಪ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ್ದರು. ಈ ಶಿಲಾಶಾಸನದ 13ನೇ ಶತಮಾನದ್ದಾಗಿದ್ದು, ಗ್ರಾಮದ ತಿಮ್ಮರಾಯಸ್ವಾಮಿ ದೇವಾಲಯದ ಮುಂದಿನ ರಸ್ತೆಯಲ್ಲಿ ಹುದುಗಲಾಗಿದೆ. ಇದು ಲೋಗ ಎಂಬ ನಾಯಿಗಾಗಿ ಹಾಕಿರುವ ಸ್ಮಾರಕವಾಗಿದೆ. ಕುಳ್ಳಯ್ಯನಾಯಕರ್ ಎಂಬುವನ ಮಗ ಹುಲಿಯ ಜೊತೆ ಹೋರಾಟ ಮಾಡಿದ ನಾಯಿಗಾಗಿನಿರ್ಮಿಸಿದ ಸ್ಮಾರಕವಾಗಿರಬಹುದು ಎನ್ನಲಾಗಿದೆ.