ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಾ ಕರ್ಫ್ಯೂ: ಕೋಲಾರದಲ್ಲಿ ಊಟ ವಿತರಣೆ

Last Updated 22 ಮಾರ್ಚ್ 2020, 13:20 IST
ಅಕ್ಷರ ಗಾತ್ರ

ಕೋಲಾರ: ಕೊರೋನಾ ಸೋಂಕು ತಡೆಗಾಗಿ ಕರೆ ನೀಡಲಾಗಿದ್ದ ಜನತಾ ಕರ್ಫ್ಯೂದಿಂದಾಗಿ ಹೋಟೆಲ್‌ಗಳು ಬಂದ್ ಆಗಿದ್ದು, ಊಟವಿಲ್ಲದೇ ಪರದಾಡುತ್ತಿದ್ದ ಅನಾಥರು, ಅಲೆಮಾರಿಗಳಿಗೆ ‘ಮುಸ್ಸಂಜೆ ಮನೆ’ಯ ಸದಸ್ಯರು ವತಿಯಿಂದ ಊಟ ವಿತರಿಸುವ ಮೂಲಕ ಮಾನವೀಯತೆ ಮೆರೆದರು.

ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್ ಹಾಗೂ ಮುಸ್ಸಂಜೆ ಮನೆಯ ಮುಖ್ಯಸ್ಥೆ ಶಾಂತಕುಮಾರಿ ಸಾಮಾಜಿಕ ಕಳಕಳಿಯೊಂದಿಗೆ ನಗರಾದ್ಯಂತ ಚಿಂದಿ ಹಾಯುತ್ತಾ ಜೀವನ ಸಾಗಿಸುವ ಅನಾಥರು, ವಸತಿ ಹೀನರನ್ನು ಹುಡುಕಿ ಊಟದ ಪೊಟ್ಟಣಗಳನ್ನು ವಿತರಿಸಿದರು.

ಅಂಗಡಿಮುಗಟ್ಟುಗಳು, ಹೋಟೆಲ್‌ಗಳು ಬಂದ್ ಆಗಿರುವುದರಿಂದ ಚಿಂದಿ ಹಾದು ರಸ್ತೆ ಬದಿಯೇ ಮಲಗಿ ಜೀವನ ನಡೆಸುವ ಅನೇಕರು ಇಂದು ಊಟಕ್ಕೆ ಪರದಾಡುವ ಸ್ಥಿತಿ ಎದುರಾಗಿತ್ತು. ಇದನ್ನು ಮನಗಂಡ ಕೆ.ಆರ್.ಧನರಾಜ್ ಹಾಗೂ ಶಾಂತಕುಮಾರಿ ಅವರು ಸ್ವತಃ ಅಡುಗೆ ಮಾಡಿ ಊಟದ ಪೊಟ್ಟಣಗಳನ್ನು ಸಿದವರಿಗೆ ವಿತರಿಸಿ ಮಾನವೀಯತೆ ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT