ಚಿಂತಾಮಣಿಯ ರೇಷ್ಮೆ ಕೃಷಿ ವಿದ್ಯಾರ್ಥಿಗಳು 3 ತಿಂಗಳ ಕಾಲ ಕೋಲಾರ ತಾಲ್ಲೂಕಿನ ನಾಗನಾಳ, ರಾಜಕಲ್ಲಹಳ್ಳಿ ಮತ್ತು ಅಂಕತಟ್ಟಿ ಗ್ರಾಮದ ರೈತರ ತೋಟಗಳಿಗೆ ಭೇಟಿ ನೀಡಿ ಕೃಷಿ ಕಾರ್ಯಾನುಭವ ಗಳಿಸಿದ್ದರು. ಪ್ರಗತಿಪರ ರೈತ ಮಂಜುನಾಥ್, ರೇಷ್ಮೆ ಕೃಷಿ ವಿ,ವಿ ಡೀನ್ ವೆಂಕಟರಮಣ, ಸುಗಟೂರು ಗ್ರಾ.ಪಂ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಸದಸ್ಯ ಭೂಪತಿಗೌಡ ಪಾಲ್ಗೊಂಡರು.