ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ರಕ್ಷಣಾ ಸೇನೆಗೆ ಆಯ್ಕೆ

Last Updated 5 ಡಿಸೆಂಬರ್ 2021, 5:06 IST
ಅಕ್ಷರ ಗಾತ್ರ

ಮುಳಬಾಗಿಲು: ಬಹುಜನ ಕನ್ನಡ ರಕ್ಷಣಾ ಸೇನೆಯ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆಯು ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಂಸ್ಥಾಪಕ ಅಧ್ಯಕ್ಷ ಸಂಗಸಂದ್ರ ಡಾ.ವಿಜಯಕುಮಾರ್ ನೇತೃತ್ವದಲ್ಲಿ ನಡೆಯಿತು.

ಮಲ್ಲನಾಯಕನಹಳ್ಳಿ ಕೃಷ್ಣಮೂರ್ತಿ (ಅಧ್ಯಕ್ಷ), ಸಂಗಸಂದ್ರ ಶ್ರೀನಿವಾಸ್ (ಉಪಾಧ್ಯಕ್ಷ), ಕಲ್ಲರಸನಹಳ್ಳಿ ರವಣಪ್ಪ (ಪ್ರಧಾನ ಕಾರ್ಯದರ್ಶಿ), ಕಾಡೇನಹಳ್ಳಿ ತಿಪ್ಪಮ್ಮ, ತೊರಡಿ ಅಂಬರೀಶ್ (ಜಂಟಿ ಕಾರ್ಯದರ್ಶಿಗಳು), ಸುಕನ್ಯಾ (ಮಹಿಳಾ ವಿಭಾಗದ ಅಧ್ಯಕ್ಷೆ), ಜೆ. ಕುರುಬರಹಳ್ಳಿ ವೆಂಕಟಾಚಲಪತಿ (ಜಿಲ್ಲಾ ಅಧ್ಯಕ್ಷ) ಅವರನ್ನು ನೇಮಕ
ಮಾಡಲಾಗಿದೆ.

ಸಂಸ್ಥಾಪಕ ಅಧ್ಯಕ್ಷ ಸಂಗಸಂದ್ರ ಡಾ.ವಿಜಯಕುಮಾರ್ ಮಾತನಾಡಿ, ನಾಡಿನ ನೆಲ, ಭಾಷೆ, ಸಂಸ್ಕೃತಿ, ಪರಂಪರೆಯನ್ನು ರಕ್ಷಣೆ ಮಾಡುವುದರ ಜೊತೆಗೆ ನಾಡಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾದಾಗ ಧ್ವನಿಯಾಗಿ ಹೋರಾಟ ಮಾಡುವ ಉದ್ದೇಶದಿಂದ ಈ ಸಂಘಟನೆಯನ್ನು ಹುಟ್ಟುಹಾಕಲಾಗಿದೆ ಎಂದರು.

ಮುಖಂಡರಾದ ಕಪ್ಪಲಮೊಡಗು ಶಂಕರ್, ಕಸವಿರೆಡ್ಡಿಹಳ್ಳಿ ರಮೇಶ್, ಜಮ್ಮನಹಳ್ಳಿ ಜಗದೀಶ್, ಮೇಲೇರಿ ಶ್ರೀನಿವಾಸ್, ವೆಂಕಟರಾಮ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT