<p><strong>ಕೆಜಿಎಫ್</strong>: ಅಡುಗೆ ಅನಿಲವನ್ನು ಆನ್ಲೈನ್ನಲ್ಲಿ ಬುಕ್ ಮಾಡಿದರೆ ಸಿಗುತ್ತದೆಯೋ ಇಲ್ಲವೋ ಎಂಬ ಭೀತಿಯಲ್ಲಿ ಗ್ರಾಹಕರು ಅನಿಲ ವಿತರಕರ ಅಂಗಡಿಗೆ ಸಿಲಿಂಡರ್ ತಂದು ಭರ್ತಿ ಮಾಡಿ ಕೊಡಿ ಎಂದು ಕೇಳುತ್ತಿರುವ ದೃಶ್ಯಗಳು ಕಂಡು ಬಂದವು.</p>.<p>ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಮುಂದಿನ ದಿನಗಳಲ್ಲಿ ಅಡುಗೆ ಅನಿಲ ದುಬಾರಿಯಾಗಬಹುದು. ಇಲ್ಲವೇ ತಕ್ಷಣಕ್ಕೆ ಸಿಗದೆ ಇರಬಹುದು ಎಂಬ ಆತಂಕದಲ್ಲಿ ಗ್ರಾಹಕರು ಖಾಲಿ ಇರುವ ಸಿಲಿಂಡರ್ ತುಂಬಿಸಲು ಬುಕ್ಕಿಂಗ್ ಆರಂಭಿಸಿದ್ದಾರೆ.</p>.<p>ಆದರೆ ವಾಣಿಜ್ಯ ಸಿಲಿಂಡರ್ಗಳ ಪರಿಸ್ಥಿತಿ ಭೀಕರವಾಗಿದೆ. ಇಲ್ಲಿನ ವಿತರಕರ ಮಾಹಿತಿಯಂತೆ ಒಂದು ವಾರದ ಹಿಂದೆಯೇ ಬುಕ್ಕಿಂಗ್ ಮುಕ್ತಾಯವಾಗಿದೆ. ಅಲ್ಲಿಂದ ಒಂದು ಸಿಲಿಂಡರ್ ಕೂಡ ಬಂದಿಲ್ಲ. ಶಾಲಾ ಮತ್ತು ವಿದ್ಯಾರ್ಥಿ ನಿಲಯ ಸೇರಿದಂತೆ ಹಲವು ಅತಿ ತುರ್ತು ವಿಭಾಗಗಳಿಗೆ ನಿರಂತರವಾಗಿ ವಾಣಿಜ್ಯ ಸಿಲಿಂಡರ್ ಕೊಡಬೇಕು ಎಂಬ ಸೂಚನೆ ಬಂದಿದೆ. ಆದರೆ, ಅದರ ಸ್ಟಾಕ್ ಕೂಡ ಬಂದಿಲ್ಲ ಎಂಬುದು ವಿತರಕರ ಮಾತಾಗಿದೆ.</p>.<p>ನಗರದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಬುಧವಾರ ಅನಿಲ ವಿತರಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ, ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಸುತ್ತೋಲೆಗಳ ಪ್ರಕಾರವೇ ಅನಿಲ ವಿತರಣೆ ಮಾಡಬೇಕು. ಯಾವುದೇ ರೀತಿಯ ಅವ್ಯವಹಾರ ನಡೆಸಬಾರದು ಎಂದು ಎಚ್ಚರಿಕೆ ನೀಡಿದರು.</p>.<p>‘ಸರ್ಕಾರಿ ಸ್ವಾಮ್ಯದ ಅನಿಲ ವಿತರಕರು ಹಲವು ಕಾನೂನುಗಳ ಮಧ್ಯೆ ಸಿಲುಕಿದ್ದರೆ, ಖಾಸಗಿ ಅನಿಲ ವಿತರಕರು ಮನಸ್ಸಿಗೆ ಬಂದಂತೆ ಅಡುಗೆ ಅನಿಲದ ಬೆಲೆ ಏರಿಸುತ್ತಿದ್ದಾರೆ. ಸರ್ಕಾರಿ ವಿತರಕರು 1 ಕೆಜಿ ವಾಣಿಜ್ಯ ಅನಿಲವನ್ನು ₹102ಕ್ಕೆ ಮಾರಾಟ ಮಾಡುವವರು. ಖಾಸಗಿ ಅನಿಲ ವಿತರಕರು ಮಾರ್ಚ್ 11 ರಂದು 1ಕೆಜಿ ವಾಣಿಜ್ಯ ಅನಿಲವನ್ನು ₹230 ಕ್ಕೆ ಮಾರಾಟ ಮಾಡಿದ್ದಾರೆಂಬುದು ವರ್ತಕರ ಮಾತಾಗಿದೆ.</p>.<p>ಹೋಟೆಲ್ಗಳ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಸ್ಟೀಂ ಬಾಯ್ಲರ್ ಇರುವ ಹೋಟೆಲ್ಗಳು ಸೌದೆ ಉಪಯೋಗಿಸಿಕೊಂಡು ವ್ಯಾಪಾರ ಮಾಡಬಹುದು. ಆದರೆ, ಸಿಲಿಂಡರ್ಗಳನ್ನೇ ನಂಬಿದ ಹೋಟೆಲ್ಗಳಿಗೆ ಪರ್ಯಾಯ ಮಾರ್ಗ ಹುಡುಕುವುದೇ ದೊಡ್ಡ ಸಮಸ್ಯೆಯಾಗಿದೆ. ಇಂಡಕ್ಷನ್ ಸ್ಟೌವ್ ಉಪಯೋಗದ ಬಗ್ಗೆ ಯೋಚಿಸಲಾಗುತ್ತಿದೆ ಎಂಬುದು ಹೋಟೆಲ್ ಮಾಲೀಕರ ಮಾತಾಗಿದೆ.</p>.<div><blockquote> ವಾಣಿಜ್ಯ ಬಳಕೆ ಸಿಲಿಂಡರ್ ಬಿಲ್ಲಿಂಗ್ ಆಗಿ ಒಂದು ವಾರವಾಯಿತು. ಡೊಮೆಸ್ಟಿಕ್ ಸಿಲಿಂಡರ್ ದಿನ ಬಿಟ್ಟು ದಿನ ಕೊಡುತ್ತಿದ್ದಾರೆ. </blockquote><span class="attribution">ಅರುಣ್ ಅನಿಲ ವಿತರಕರು</span></div>.<div><blockquote> ಇನ್ನು ಎರಡು ದಿನ ಹೋಟೆಲ್ ನಡೆಸಬಹುದು. ನಂತರ ಪರ್ಯಾಯ ಮಾರ್ಗದ ಬಗ್ಗೆ ಯೋಚಿಸಬೇಕು. ದೋಸೆ ಉತ್ತರ ಭಾರತೀಯ ತಿಂಡಿ ನಿಲ್ಲಿಸುವುದು ಅನಿವಾರ್ಯ </blockquote><span class="attribution"> ರಾಮಕೃಷ್ಣ ಹೋಟೆಲ್ ಮಾಲೀಕರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಜಿಎಫ್</strong>: ಅಡುಗೆ ಅನಿಲವನ್ನು ಆನ್ಲೈನ್ನಲ್ಲಿ ಬುಕ್ ಮಾಡಿದರೆ ಸಿಗುತ್ತದೆಯೋ ಇಲ್ಲವೋ ಎಂಬ ಭೀತಿಯಲ್ಲಿ ಗ್ರಾಹಕರು ಅನಿಲ ವಿತರಕರ ಅಂಗಡಿಗೆ ಸಿಲಿಂಡರ್ ತಂದು ಭರ್ತಿ ಮಾಡಿ ಕೊಡಿ ಎಂದು ಕೇಳುತ್ತಿರುವ ದೃಶ್ಯಗಳು ಕಂಡು ಬಂದವು.</p>.<p>ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಮುಂದಿನ ದಿನಗಳಲ್ಲಿ ಅಡುಗೆ ಅನಿಲ ದುಬಾರಿಯಾಗಬಹುದು. ಇಲ್ಲವೇ ತಕ್ಷಣಕ್ಕೆ ಸಿಗದೆ ಇರಬಹುದು ಎಂಬ ಆತಂಕದಲ್ಲಿ ಗ್ರಾಹಕರು ಖಾಲಿ ಇರುವ ಸಿಲಿಂಡರ್ ತುಂಬಿಸಲು ಬುಕ್ಕಿಂಗ್ ಆರಂಭಿಸಿದ್ದಾರೆ.</p>.<p>ಆದರೆ ವಾಣಿಜ್ಯ ಸಿಲಿಂಡರ್ಗಳ ಪರಿಸ್ಥಿತಿ ಭೀಕರವಾಗಿದೆ. ಇಲ್ಲಿನ ವಿತರಕರ ಮಾಹಿತಿಯಂತೆ ಒಂದು ವಾರದ ಹಿಂದೆಯೇ ಬುಕ್ಕಿಂಗ್ ಮುಕ್ತಾಯವಾಗಿದೆ. ಅಲ್ಲಿಂದ ಒಂದು ಸಿಲಿಂಡರ್ ಕೂಡ ಬಂದಿಲ್ಲ. ಶಾಲಾ ಮತ್ತು ವಿದ್ಯಾರ್ಥಿ ನಿಲಯ ಸೇರಿದಂತೆ ಹಲವು ಅತಿ ತುರ್ತು ವಿಭಾಗಗಳಿಗೆ ನಿರಂತರವಾಗಿ ವಾಣಿಜ್ಯ ಸಿಲಿಂಡರ್ ಕೊಡಬೇಕು ಎಂಬ ಸೂಚನೆ ಬಂದಿದೆ. ಆದರೆ, ಅದರ ಸ್ಟಾಕ್ ಕೂಡ ಬಂದಿಲ್ಲ ಎಂಬುದು ವಿತರಕರ ಮಾತಾಗಿದೆ.</p>.<p>ನಗರದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಬುಧವಾರ ಅನಿಲ ವಿತರಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ, ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಸುತ್ತೋಲೆಗಳ ಪ್ರಕಾರವೇ ಅನಿಲ ವಿತರಣೆ ಮಾಡಬೇಕು. ಯಾವುದೇ ರೀತಿಯ ಅವ್ಯವಹಾರ ನಡೆಸಬಾರದು ಎಂದು ಎಚ್ಚರಿಕೆ ನೀಡಿದರು.</p>.<p>‘ಸರ್ಕಾರಿ ಸ್ವಾಮ್ಯದ ಅನಿಲ ವಿತರಕರು ಹಲವು ಕಾನೂನುಗಳ ಮಧ್ಯೆ ಸಿಲುಕಿದ್ದರೆ, ಖಾಸಗಿ ಅನಿಲ ವಿತರಕರು ಮನಸ್ಸಿಗೆ ಬಂದಂತೆ ಅಡುಗೆ ಅನಿಲದ ಬೆಲೆ ಏರಿಸುತ್ತಿದ್ದಾರೆ. ಸರ್ಕಾರಿ ವಿತರಕರು 1 ಕೆಜಿ ವಾಣಿಜ್ಯ ಅನಿಲವನ್ನು ₹102ಕ್ಕೆ ಮಾರಾಟ ಮಾಡುವವರು. ಖಾಸಗಿ ಅನಿಲ ವಿತರಕರು ಮಾರ್ಚ್ 11 ರಂದು 1ಕೆಜಿ ವಾಣಿಜ್ಯ ಅನಿಲವನ್ನು ₹230 ಕ್ಕೆ ಮಾರಾಟ ಮಾಡಿದ್ದಾರೆಂಬುದು ವರ್ತಕರ ಮಾತಾಗಿದೆ.</p>.<p>ಹೋಟೆಲ್ಗಳ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಸ್ಟೀಂ ಬಾಯ್ಲರ್ ಇರುವ ಹೋಟೆಲ್ಗಳು ಸೌದೆ ಉಪಯೋಗಿಸಿಕೊಂಡು ವ್ಯಾಪಾರ ಮಾಡಬಹುದು. ಆದರೆ, ಸಿಲಿಂಡರ್ಗಳನ್ನೇ ನಂಬಿದ ಹೋಟೆಲ್ಗಳಿಗೆ ಪರ್ಯಾಯ ಮಾರ್ಗ ಹುಡುಕುವುದೇ ದೊಡ್ಡ ಸಮಸ್ಯೆಯಾಗಿದೆ. ಇಂಡಕ್ಷನ್ ಸ್ಟೌವ್ ಉಪಯೋಗದ ಬಗ್ಗೆ ಯೋಚಿಸಲಾಗುತ್ತಿದೆ ಎಂಬುದು ಹೋಟೆಲ್ ಮಾಲೀಕರ ಮಾತಾಗಿದೆ.</p>.<div><blockquote> ವಾಣಿಜ್ಯ ಬಳಕೆ ಸಿಲಿಂಡರ್ ಬಿಲ್ಲಿಂಗ್ ಆಗಿ ಒಂದು ವಾರವಾಯಿತು. ಡೊಮೆಸ್ಟಿಕ್ ಸಿಲಿಂಡರ್ ದಿನ ಬಿಟ್ಟು ದಿನ ಕೊಡುತ್ತಿದ್ದಾರೆ. </blockquote><span class="attribution">ಅರುಣ್ ಅನಿಲ ವಿತರಕರು</span></div>.<div><blockquote> ಇನ್ನು ಎರಡು ದಿನ ಹೋಟೆಲ್ ನಡೆಸಬಹುದು. ನಂತರ ಪರ್ಯಾಯ ಮಾರ್ಗದ ಬಗ್ಗೆ ಯೋಚಿಸಬೇಕು. ದೋಸೆ ಉತ್ತರ ಭಾರತೀಯ ತಿಂಡಿ ನಿಲ್ಲಿಸುವುದು ಅನಿವಾರ್ಯ </blockquote><span class="attribution"> ರಾಮಕೃಷ್ಣ ಹೋಟೆಲ್ ಮಾಲೀಕರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>