ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿಯಪ್ಪ ಹೇಳಿಕೆ: ಪ್ರತಿಕ್ರಿಯೆಗೆ ರಮೇಶ್‍ಕುಮಾರ್ ನಿರಾಕರಣೆ

Last Updated 31 ಮಾರ್ಚ್ 2022, 13:01 IST
ಅಕ್ಷರ ಗಾತ್ರ

ಕೋಲಾರ: ‘ನಾನು ಕಳೆದ 4 ವರ್ಷಗಳಲ್ಲಿ ಯಾವುದೇ ವಿಚಾರಕ್ಕಾದರೂ ಪ್ರತಿಕ್ರಿಯಿಸಿದ್ದೀನಾ? ಈಗಲೂ ಅಷ್ಟೇ, ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ’ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ತಮ್ಮ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪರ ಮಾತುಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಮುನಿಯಪ್ಪರ ಹೇಳಿಕೆ ವಿಚಾರವಾಗಿ ಇಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಮೇಶ್‌ಕುಮಾರ್‌, ‘ಪ್ರತಿಕ್ರಿಯೆ ಇಲ್ಲ ಎಂದ ಮೇಲೆ ಮುಗಿಯಿತು. ಮಾಧ್ಯಮದವರು ಏನಾದರೂ ಅಂದುಕೊಳ್ಳಿ, ತಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ’ ಎಂದರು.

‘ಕ್ರಿಯೆ ಅವರದ್ದು ಆಗಿದೆ ಎಂದ ಮೇಲೆ ಪ್ರತಿಕ್ರಿಯೆಗೂ ಅವರನ್ನೇ ಕೇಳಿ. ಮಾತನಾಡಲು ನಾನು ಯಾವ ನಾಯಕನಪ್ಪಾ? ನಾನು ಮಾತನಾಡಲು ಹಿಂದೇಟು ಹಾಕುತ್ತಿದ್ದೇನೆ ಅಲ್ಲವೇ? ಹಾಗಾದರೆ ತಾವೇ ಮುಂದೇಟು ಹಾಕಿಕೊಳ್ಳಿ. ಮಾಧ್ಯಮದವರಿಗೆ ಎಲ್ಲಾ ಸ್ವಾತಂತ್ರ್ಯವಿದೆ. ನಾನು ಯಾವುದೇ ವಿಚಾರದ ಬಗ್ಗೆ ಈಗ ಮಾತನಾಡಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT