ರಾಜ್ಯದಲ್ಲಿ ಕೆಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ, ಮುಂಬೈನತ್ತ ಪಯಣ ಬೆಳೆಸಿದ್ದಾರೆ. ಇದರಿಂದಾಗಿಶಾಸಕ ಕೆ. ಶ್ರೀನಿವಾಸಗೌಡ ಅವರು ಕೂಡ ಅತೃಪ್ತ ಶಾಸಕರ ಗುಂಪನ್ನು ಸೇರಲು ಮುಂಬೈಗೆ ಹೊರಟಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಈ ವದಂತಿಗಳಿಗೆ ಖುದ್ದು ಶ್ರೀನಿವಾಸಗೌಡರೇ ತೆರೆ ಎಳೆದಿದ್ದು, ‘ನಾನು ಇಪ್ಕೋ ಅಧ್ಯಕ್ಷನಾಗಿರುವುದರಿಂದ ಆಡಳಿತ ಮಂಡಳಿ ಸಭೆ ಮತ್ತು ಔತಣಕೂಟವೊಂದರಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುತ್ತಿರುವೆ. ನನ್ನ ಬಗ್ಗೆ ಸುಳ್ಳು ವದಂತಿ ಹರಡಲಾಗುತ್ತದೆ’ ಎಂದು ತಿಳಿಸಿದರು.